ಬಂಟ್ವಾಳ: ಬಂಟ್ವಾಳ ತಾ.ಉಳಿ ಗ್ರಾಮದ ಕೊರಡಿಂಗೇರಿ ಬ್ರಹ್ಮಶ್ರೀ ನಾರಾಯಣಗುರು ಸೇವಾ ಟ್ರಸ್ಟ್ ವತಿಯಿಂದ ಬ್ರಹ್ಮಶ್ರೀ ನಾರಾಯಣಗುರು ಸ್ವಾಮಿ ಅವರ ೧೬೮ನೇ ಜನ್ಮದಿನಾಚರಣೆ ಮತ್ತು ಗುರುಪೂಜೆ ಹಾಗೂ ಸಾಧಕರಿಗೆ ಸಮ್ಮಾನ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಸುಧೆಕಾರ್ ಕಮಲಾಕ್ಷಿ ಅವರ ನಿವಾಸದ ವಠಾರದಲ್ಲಿ ನಡೆಯಿತು.
ಜಯಾನಂದ ಕೊರಡಿಂಗೇರಿ ಅವರು ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ನಿವೃತ್ತ ಪಂಚಾಯತ್ ಅಭಿವೃದ್ಧಿ ಅಽಕಾರಿ ಶ್ರೀಧರ, ನಿವೃತ್ತ ಸಹಾಯಕ ಶುಶ್ರೂಷಕ ಅಽಕಾರಿ ಚಂದ್ರಶೇಖರ ಅವರನ್ನು ಸಮ್ಮಾನಿಸಲಾಯಿತು. ಎಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತ್ಯಽಕ ಅಂಕ ಗಳಿಸಿದ ವ್ಯಾಪ್ತಿಯ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಸಲಾಯಿತು. ಭಜನ ಸಂಕೀರ್ತನೆ ನಡೆಯಿತು.
ಪ್ರಮುಖರಾದ ಮೋನಪ್ಪ ಪೂಜಾರಿ ಕಾಲಾಯ, ದಂತ ವೈದ್ಯ ಡಾ. ರಾಜಾರಾಮ್ ಕೋಂಗುಜೆ, ನವೀನ್ ಬೆಂಜನಪದವು,ಚೆನ್ನಪ್ಪ ಸಾಲ್ಯಾನ್ ಆಜೋಡಿ, ಮೋಹನ್ ಸಾಲ್ಯಾನ್ ಹೆಗ್ಗಡೆಬೆಟ್ಟು, ಕೆ.ಮಾಯಿಲಪ್ಪ ಸಾಲ್ಯಾನ್, ವಿಶ್ವನಾಥ ಸಾಲ್ಯಾನ್ ಬಿತ್ತ, ವಿಶ್ವನಾಥ ಪೂಜಾರಿ ಕುತ್ತಾಡಿ, ಅಣ್ಣಿ ಪೂಜಾರಿ ಚೀಮುಳ್ಳು ಮತ್ತಿತರರು ಉಪಸ್ಥಿತರಿದ್ದರು.
ತಿಲಕ್ ಪೂಜಾರಿ ಸುದೆಕ್ಕಾರು ಸ್ವಾಗತಿಸಿದರು. ಸಂಘದ ಅಧ್ಯಕ್ಷ ಚಿದಾನಂದ ಕೊರಡಿಂಗೇರಿ ವಂದಿಸಿದರು. ಕೇಶವ ತಿಮರಡ್ಡ ಕಾರ್ಯಕ್ರಮ ನಿರೂಪಿಸಿದರು.