ಬಂಟ್ವಾಳ: ತಾಲೂಕಿನ ಕಲ್ಲಡ್ಕದಲ್ಲಿರುವ ಅತ್ಯಪೂರ್ವ ನೋಟು, ನಾಣ್ಯ, ವಸ್ತುಗಳ ಸಂಗ್ರಾಹಕ ಯಾಸಿರ್ ರವರ ಕಲ್ಲಡ್ಕ ಮ್ಯೂಸಿಯಂಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.ಯವರು ಶುಕ್ರವಾರ ಅಪರಾಹ್ನ ಭೇಟಿ ನೀಡಿದರು.
ಯಾಸಿರ್ ಕಲ್ಲಡ್ಕ ರವರ ಕಲ್ಲಡ್ಕ ಮ್ಯೂಸಿಯಂ ನಲ್ಲಿರುವ ಫ್ಯಾನ್ಸಿ ನಂಬರ್ ಗಳ ನೋಟುಗಳ ಸಂಗ್ರಹ, ನಾಣ್ಯ ಹಾಗೂ ವಿವಿಧ ವಸ್ತುಗಳ ಸಂಗ್ರಹ, ಅವುಗಳ ಬಗ್ಗೆ ಯಾಸಿರ್ ನೀಡುವ ವಿವರವನ್ನು ಕಂಡು ಜಿಲ್ಲಾಧಿಕಾರಿ ಬೆರಗಾದರು. ಒಂದಕ್ಕಿಂತ ಭಿನ್ನ, ವಿಭಿನ್ನವಾದ ಚಿಂತನೆಯ ಜೊತೆಗೆ ಅತ್ಯಪೂರ್ವ ಸಂಗ್ರಹವನ್ನು ಮಾಡಿದ ಯಾಸಿರ್ ಶ್ರಮವನ್ನು ಶ್ಲಾಘಿಸಿದ ಜಿಲ್ಲಾಧಿಕಾರಿಯವರು,ಅಧ್ಯಯನ ನಡೆಸುವ ವಿದ್ಯಾರ್ಥಿಗಳು ಈ ವಸ್ತು ಸಂಗ್ರಹಾಲಯ ವನ್ನು ಸಂದರ್ಶಿಸಲೇಬೇಕು, ಅಂತಹಾ ವಿಶಿಷ್ಟತೆಗಳನ್ನು ಕಲ್ಲಡ್ಕ ಮ್ಯೂಸಿಯಂ ಹೊಂದಿದೆ ಎಂದು ಅವರು ಪ್ರಶಂಸೆ ವ್ಯಕ್ತಪಡಿಸಿದರು.