ಮಂಗಳೂರು: ಆಡಳಿತದಲ್ಲಿರುವ ಸರಕಾರ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಹಾಗೂ ಅದರ ಸಹವರ್ತಿ ಸಂಸ್ಥೆಗಳ ಮೇಲೆ ನಿರ್ಬಂಧ ಹೇರಿರುವುದನ್ನು ಅಖಿಲ ಭಾರತ ಹಿಂದೂ ಮಹಾಸಭಾ ಸ್ವಾಗತಿಸುತ್ತದೆ ಇದು ಹಿಂದುತ್ವಕ್ಕೆ ಸಿಕ್ಕ ಗೆಲುವು ಎಂದು ರಾಜ್ಯಾಧ್ಯಕ್ಷರಾದ ರಾಜೇಶ್ ಪವಿತ್ರ ನ್ ಹರ್ಷ ವ್ಯಕ್ತಪಡಿಸಿದರು.
ಆದರೆ ಭಾರತೀಯ ಜನತಾ ಪಕ್ಷ ನೇತೃತ್ವದ ಸರಕಾರ ಪಿಎಫ್ಐ ಮೇಲೆ ನಿರ್ಬಂಧ ಹೇರಿ ಅದರ ರಾಜಕೀಯ ಮುಖವಾಣಿ ಯಾದ ಎಸ್ ಡಿಪಿಐ ಯಾನ್ನು ಹಾಗೆ ಬಿಟ್ಟಿರುವುದು ಭಾರತೀಯ ಜನತಾ ಪಕ್ಷದ ಇಚ್ಛಾಶಕ್ತಿಯ ದೋಷ ಎಂದು ತಿಳಿಸಿದರು.
ಒಂದು ವೇಳೆ ಸ್ಡಿಪಿಐ ಮೇಲೆ ನಿರ್ಬಂಧವನ್ನು ಹೇರಿದರೆ ಬರುವಂತ ಚುನಾವಣೆಯಲ್ಲಿ ಹಿಂದೂ ಮಹಾಸಭಾ ಕರ್ನಾಟಕ ಚುನಾವಣೆಯಿಂದ ಹಿಂದಕ್ಕೆ ಸರಿದು ತನ್ನ ಹಾಗೂ ತನ್ನ ಅಂಗ ಘಟಕಗಳ ಬೇಶರತ್ತು ಬೆಂಬಲವನ್ನು ಭಾರತೀಯ ಜನತಾ ಪಕ್ಷಕ್ಕೆ ಕೊಟ್ಟು ರಾಜ್ಯದಲ್ಲಿ ಮತ್ತೊಮ್ಮೆ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೇ ಬರುವಂತೆ ಮಾಡುತ್ತೇವೆ ಎಂದು ಘೋಷಿಸಿದರು.