ಬೆಳ್ತಂಗಡಿ: ಉಜಿರೆ ಹಳ್ಳಿಮನೆ ಎದುರಿನ ಎ.ಎಸ್ ಅಪಾರ್ಟ್ಮೆಂಟ್ ನಲ್ಲಿ ಅಪಾರ್ಟ್ಮೆಂಟ್ ನಿವಾಸಿಗಳಿಗೆ ಮತ್ತು ಸಾರ್ವಜನಿಕರಿಗೆ ಆಯುಶ್ಮಾನ್ ಮತ್ತು ಈ ಶ್ರಮ್ ಕಾರ್ಡ್ ನೊಂದಣಿ ಶಿಬಿರ ಆ. 21 ರಂದು ಜರುಗಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಕಾರದೊಂದಿಗೆ ನಡೆದ ಕಾರ್ಯಕ್ರಮ ದಲ್ಲಿ ಅಪಾರ್ಟ್ಮೆಂಟ್ ಮಾಲಿಕ, ಸಿವಿಲ್ ಗುತ್ತಿಗೆದಾರ ಕೆ.ಎಂ ಅಬ್ಬಾಸ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಶಂಕರ್ ಗೌಡ ಇವರು ಮುಖ್ಯಸ್ಥಿಕೆ ವಹಿಸಿದ್ದರು.
ಅಪಾರ್ಟ್ಮೆಂಟ್ನ ಎಲ್ಲಾ ಮನೆಗಳ ಎಲ್ಲಾ ಸದಸ್ಯರ ಸಹಕಾರದೊಂದಿಗೆ, ಆಯುಷ್ಮಾನ್ ಕಾರ್ಡ್ ಹಾಗೂ ಈ ಶ್ರಮ್ ಕಾರ್ಡ್ ಅಭಿಯಾನ ನಡೆಸಿ ಒಟ್ಟು 55 ಆಯುಷ್ಮಾನ್ ಕಾರ್ಡ್ಗಳು, 10 ಈ ಶ್ರಮ್ ಕಾರ್ಡುಗಳ ನೊಂದಾವಣೆ ನಡೆಸಲಾಯಿತು.