News Karnataka Kannada
Friday, May 03 2024
ಮಂಗಳೂರು

ಗೌರವ ಧನ ಜಾರಿಗೊಳಿಸುವಂತೆ ಸರಕಾರಕ್ಕೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರಿಂದ ಬೆಂಗಳೂರು ಚಲೋ

Amngnavdi
Photo Credit : News Kannada

ಮಂಗಳೂರು: 6ನೇ ಗ್ಯಾರೆಂಟಿಯನ್ನ ಜಾರಿಗೊಳಿಸುವಂತೆ ಸರಕಾರಕ್ಕೆ ಅಂಗನವಾಡಿ ಕಾರ್ಯಕರ್ತೆಯರ ಆಗ್ರಹಿಸಿ ನವೆಂಬರ್ 28 ರಂದು ಬೆಂಗಳೂರು ಚಲೋ ನಡೆಯಲಿದೆ.

ಚುನಾವಣೆ ಪೂರ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ 15000 ಗೌರವ ಧನ ಎಂದು ಭರವಸೆಯನ್ನು ಸರಕಾರ ನೀಡಿತ್ತು. ಆದರೆ ಇದೀಗ ಭರವಸೆಯೂ ಇಲ್ಲ ಅದರೊಂದಿಗೆ ಕೆಲಸದ ಒತ್ತಡವನ್ನು ಜಾಸ್ತಿ ಮಾಡಲಾಗಿದೆ ಎಂದು ಮಂಗಳೂರಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಅಳಲು ಹೇಳಿಕೊಂಡಿದ್ದಾರೆ.

ಅಂಗಡಿ ಕಾರ್ಯಕರ್ತೆಯರು ಯಾರು ಅನ್ನೋದೇ ಸರಕಾರಕ್ಕೇ ಮರೆತು ಹೋಗಿದೆ. ಪ್ರಿಯಾಂಕಾ ಗಾಂಧಿ ಗೌರವ ಧನ ಹೆಚ್ಚಿಸುವ ಕುರಿತು ಭರವಸೆ ನೀಡಿದ್ದರು. ಆದರೆ ಈಗಿನ ಸರಕಾರ ಮುಖ್ಯಮಂತ್ರಿಗಳು ಇದನ್ನ ಮರೆತಿದ್ದಾರೆ ಎಂದರು.

ಅತ್ತ ಗೌರವ ಧನವನ್ನ ಏರಿಕೆ ಮಾಡಲಿಲ್ಲ ಇನ್ನೊಂದೆಡೆ ಗೃಹ ಲಕ್ಷ್ಮಿಯ ಕೆಲಸವನ್ನೂ ನಾವೇ ಮಾಡಬೇಕು. ನಾವು ಕೆಲಸಕ್ಕೆ ಸೇರಿ 35 ವರ್ಷ ಜಾಸ್ತಿಯಾಯಿತು. ಅಂಗನವಾಡಿ ಕಾರ್ಯಕರ್ತರ ಸೇವೆ ಪರಿಗಣಿಸಿ ನೌಕರರು ಅಂತ ಪರಿಗಣಿಸುವುದಿಲ್ಲ.ಅಂಗನವಾಡಿ
ಕಾರ್ಯಕರ್ತೆಯರನ್ನೂ ಯಾಕೆ ಹೀಗೆ ಶೋಷಣೆ ಮಾಡುತ್ತಾರೆ.

ನಮಗೂ ಸಮಾಜದಲ್ಲಿ ಗೌರವಯುತವಾಗಿ ಬದುಕುವ ಅವಕಾಶ ಕಲ್ಪಿಸಿಕೊಡಿ. ಶಿಕ್ಷಣ ಕೊಡ್ತೇವೆ, ಮನೆ ಮನೆ ಭೇಟಿ ಮಾಡ್ತೇವೆ,37 ರೆಜಿಸ್ಟರ್ಸ್ ಎಲ್ಲವನ್ನೂ ನಾವು ನಿರ್ವಹಿಸಬೇಕು. ಬದುಕುವಷ್ಟು ಸಂಬಳವನ್ನಾದರೂ ನಮಗೆ ನೀಡಬೇಕು. ಇದೆ ಕಾರಣಕ್ಕೆ ನಾವು ನವೆಂಬರ್ 28ರಂದು ಅಂಗನವಾಡಿ ಮುಷ್ಕರದಲ್ಲಿ ಭಾಗಿಯಾಗುತ್ತೇವೆ. ಎಲ್ಲವನ್ನೂ ಹೋರಾಟದಿಂದಲೇ ಪಡೆಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಅಂಗನವಾಡಿ ನೌಕರರ ಸಂಘದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು