News Karnataka Kannada
Friday, May 03 2024
ಮಂಗಳೂರು

ಅನಂತಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರ ಮೇಲೆ ಹಲ್ಲೆ ಆರೋಪ – ಆಸ್ಪತ್ರೆಗೆ ದಾಖಲು

Anantadi gram panchayat president charged with assault by mob, hospitalised
Photo Credit : By Author

ಬಂಟ್ವಾಳ: ತಂಡವೊಂದು ಹಲ್ಲೆ ನಡೆಸಿದೆ ಎಂದು ಆರೋಪಿಸಿ ಅನಂತಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರೋರ್ವರು ಪುತ್ತೂರಿನ ಆದರ್ಶ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಅನಂತಾಡಿ ಗ್ರಾಮ ಪಂಚಾಯತ್‌ ಅಧ್ಯಕ್ಷರಾಗಿರುವ ಗಣೇಶ್ ಪೂಜಾರಿ ಬಂಟ್ರಿಂಜ(೬೦ ವ.) ರವರು ಆಸ್ಪತ್ರೆಯಲ್ಲಿ ದಾಖಲಾದವರಾಗಿದ್ದು, ಮೊನ್ನೆ ನಡೆದ ನಮ್ಮ ಗ್ರಾಮ ಸಭೆಯಲ್ಲಿ ರಸ್ತೆಬದಿಯಲ್ಲಿರುವ ಚರಂಡಿಗಳಲ್ಲಿ ಕಸಕಡ್ಡಿಗಳು ತುಂಬಿ ನೀರು ರಸ್ತೆಯಲ್ಲಿ ಹೋಗುತ್ತಿದ್ದು, ಇದಕ್ಕೊಂದು ಪರಿಹಾರ ಕಂಡುಕೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದರು. ಈ ನಿಟ್ಟಿನಲ್ಲಿ ನಾನು ಗುತ್ತಿಗೆದಾರರನ್ನು ಕರೆದುಕೊಂಡು ನಮ್ಮ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಿಡಬ್ಲ್ಯೂ ರಸ್ತೆ ಯ ಬದಿಯಲ್ಲಿ ಚರಂಡಿಯನ್ನು ಸ್ವಚ್ಚ ಮಾಡಿಸುತ್ತಿದ್ದ ವೇಳೆ ಬಾಕಿಲ ನಿವಾಸಿ ಸತೀಶ್ ಪೂಜಾರಿ ಎಂಬವರು ನನ್ನನ್ನು ಅವಾಚ್ಯ‌ಶಬ್ದಗಳಿಂದ ಬೈದು ನಿಂದಿಸಿ ಅವರ ಸಂಬಂಧಿ ಸುಕೇಶ್ ಸಹಿತ ಐವರಿದ್ದ ತಂಡದೊಂದಿಗೆ ಸೇರಿ ನನ್ನ ಮೇಲೆಹಲ್ಲೆ ನಡೆಸಿದ್ದಾರೆ.

ಘಟನೆಯಿಂದಾಗಿ ಗಾಯಗೊಂಡ ನಾನು ಪರಿಚಿತನೋರ್ವನ ಸಹಾಯದಿಂದ ಆಸ್ಪತ್ರೆಗೆ ದಾಖಲಾಗಿದ್ದೇನೆ. ಈ ಬಗ್ಗೆ ವಿಟ್ಲ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದೇನೆ ಎಂದು ಗಣೇಶ್ ರವರು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
153
Mounesh V

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು