ಮಂಗಳೂರು: ಅನ್ಯಕೋಮಿನ ವ್ಯಕ್ತಿಯ ಮೇಲೆ ಗುಂಪೊಂದು ತಲವಾರು ದಾಳಿ ನಡೆಸಿದ ಘಟನೆ ಮಂಗಳೂರಿನ ಹೊರವಲಯದ ಕಾವೂರು ಎಂ.ವಿ ಶೆಟ್ಟಿ ಕಾಲೇಜು ಬಳಿ ನಡೆದಿದೆ.
ಘಟನೆ ಸಂಬಂಧ ಪಂಜಿಮೊಗರು ನಿವಾಸಿ ಚರಣ್ ರಾಜ್ (23), ಸುಮಂತ್ ಬರ್ಮನ್ (24), ಅವಿನಾಶ್ (24) ಅವರನ್ನು ಬಂಧಿಸಲಾಗಿದೆ.
ಆಗಷ್ಟ್ 20ರಂದು ಅನ್ಯ ಕೋಮಿನ ವ್ಯಕ್ತಿಯೊಬ್ಬರು ಸ್ಕೂಟಿಯಲ್ಲಿ ತೆರಳುತ್ತಿದ್ದಾಗ, ಸ್ಕೂಟಿ ಅಡ್ಡ ಹಾಕಿದ ಚರಣ್ ರಾಜ್, ಸುಂತ್ ಬರ್ಮನ್ ಹಾಗು ಅವಿನಾಶ್ ತಲವಾರು ಬೀಸಿ ಹಲ್ಲೆ ಮಾಡಿದ್ದಾರೆ. ಸದ್ಯ ಪ್ರಕರಣ ಸಂಬಂಧ 24 ಗಂಟೆಗಳಲ್ಲಿ ಮೂವರನ್ನು ಬಂಧಿಸಿದ್ದು, ಬಂಧಿತರಿಂದ ಕೃತ್ಯಕ್ಕೆ ಬಳಸಿದ ತಲವಾರು, ವಾಹನವನ್ನು ಖಾಕಿ ವಶಕ್ಕೆ ಪಡೆದಿದೆ.