ಮಂಗಳೂರು: ಕರ್ಣಾಟಕ ಬ್ಯಾಂಕಿನ ೯೯ನೆಯ ವಾರ್ಷಿಕ ಮಹಾಸಭೆಯು ಆ. ೨೯ ರಂದು ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ಜರುಗಿತು.
ಬ್ಯಾಂಕಿನ ಚೇರ್ಮನ್ ಪಿ. ಪ್ರದೀಪ್ ಕುಮಾರ್ ಅವರು ಅಧ್ಯಕ್ಷತೆ ವಹಿಸಿ ಶೇರುದಾರರನ್ನು ಉದ್ದೇಶಿಸಿ ಮಾತನಾಡಿದರು. ಬ್ಯಾಂಕಿನ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಸಿಇಒ ಶ್ರಿಕೃಷ್ಣನ್ ಹೆಚ್ ಅವರು ಮಾತನಾಡಿ ಶೇರುದಾರರ ಪ್ರಶ್ನೆಗಳಿಗೆ ಉತ್ತರಿಸಿದರು.
ವಿತ್ತೀಯ ವರ್ಷ ೨೦೨೨-೨೩ಕ್ಕೆ ಅನುವಾಗುವಂತೆ ಪ್ರತಿ ಶೇರ್ಗೆ ರೂಪಾಯಿ ೫ ರಂತೆ (ಶೇ.೫೦) ಡಿವಿಡೆಂಡ್ಅನ್ನು ಶೇರುದಾರರಿಗೆ ನೀಡಲು ಈ ಸಭೆಯಲ್ಲಿ ಅನುಮೋದಿಸಲಾಯಿತು. ಈ ಸಂದರ್ಭದಲ್ಲಿ ಬ್ಯಾಂಕಿನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಶೇಖರ್ ರಾವ್, ನಿರ್ದೇಶಕರಾದ ಜೀವನ್ದಾಸ್ ನಾರಾಯಣ್, ಉನ್ನತ ಅಧಿಕಾರಿಗಳು, ಕಾನೂನು ಸಲಹೆಗಾರರು ಹಾಗೂ ಇ-ಮತದಾನದ ಪರಿವೀಕ್ಷಕರು ಉಪಸ್ಥಿತರಿದ್ದರು.