News Karnataka Kannada
Monday, April 29 2024
ಮಂಗಳೂರು

ಮಂಗಳೂರು ಉತ್ತರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ 2 ಬಾವಲಿಗಳ ಹಾರಾಟ: ಭರತ್‌ ವ್ಯಂಗ್ಯ

He won by a margin of over 55,000 votes. BharatShetty confident
Photo Credit : News Kannada

ಮಂಗಳೂರು: ಮಂಗಳೂರಿನ ಕಾವೂರಿನಲ್ಲಿ ವಿಜಯ ಸಂಕಲ್ಪ ಯಾತ್ರೆ ನಡೆಯಿತು. ಸಂಕಲ್ಪಯಾತ್ರೆಯ ಬಹಿರಂಗ ಸಭೆ ಯಲ್ಲಿಗೋವಾ ಸಿ ಎಂ ಪ್ರಮೋದ್ ಸಾವಂತ್‌, ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ , ಮಾಜಿ ಸಚಿವ ಈಶ್ವರಪ್ಪ ಪಾಲ್ಗೊಂಡರು.

ಈ ವೇಳೆ ಮಾತನಾಡಿ ಶಾಸಕ ಭರತ್‌ ಶೆಟ್ಟಿ ರಾಜ್ಯದಲ್ಲಿ ಅಭಿವೃದ್ದಿಯ ಪರ್ವ ಆರಂಭವಾಗಿದೆ ದೇಶವೇ ತಿರುಗಿ ನೋಡುವಂತೆ ಕರ್ನಾಟಕ ಅಭಿವೃದಿ ಯಾಗಿದೆ. ಸಿದ್ದರಾಮಯ್ಯ ಸರ್ಕಾರ ರಾಜ್ಯದಲ್ಲಿದ್ದಾಗ ಹಿಂದುಗಳ ಸರಣಿ ಕೊಲೆ ನಡೆಯಿತು. ಈ ಕೊಲೆಗಳ ಹಿಂದಿರುವ ಪಿ ಎಫ್ ಐ ಮುಖಂಡರನ್ನು ಪೊಲೀಸರು ಬಂಧಿಸಿದ್ದರು.

ಆದರೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಪಿಎಫ್ ಐ ಕೊಲೆಗಡುಕರನ್ನು ಜೈಲಿನಿಂದ ಬಿಡುಗಡೆ ಮಾಡಿತು. ಅವರ ಮೇಲಿದ್ದ ಕೇಸ್ ಗಳನ್ನು ಹಿಂಪಡೆಯಲಾಯಿತು. ಭಯೋತ್ಪಾದಕ ಸಂಘಟನೆಯಾದಂತ ಪಿ ಎಫ್ ಐ ಬ್ಯಾನ್ ಮಾಡಿದ್ದು ಗುಂಡಿಗೆಯ ಬಿಜೆಪಿ ಸರ್ಕಾರ. ಉತ್ತರ ಕ್ಷೇತ್ರದಲ್ಲಿ ಕಾಂಗ್ರೆಸ್ ನ 2 ಬಾವಲಿಗಳು ಹಾರಾಡುತ್ತಿವೆ. ಒಂದು ಬಾವ ಮತ್ತೊಂದು ಅಲಿ ಬಾವ-ಅಲಿ.

ಚುನಾವಣೆ ಹತ್ತಿರ ಬಂದಾಗ ಹೊಸ ಹೊಸ ವೇಷ ಹಾಕಿ ಬಾವಲಿಗಳು ಬರುತ್ತಿವೆ. ಒಬ್ಬ ಹಾಣದ ಮೇಲೆ ರಾಜಕಾರಣ ಮತ್ತೊಬ್ಬ ಚೆಕ್‌ ಬೌನ್ಸ್ ನಲ್ಲಿ ಹೆಸರು ಮಾಡಿದವ. ಟಿಕೆಟ್ ಗೆ ಎರಡು ಬಾವಲಿಗಳು ಹೊಡೆದಾಡಿ ಕೊಳ್ಳುತ್ತಿವೆ ಎಂದು ವ್ಯಂಗ್ಯವಾಡಿದರು. ಈ ಬಾವಲಿಗಳು ಎಷ್ಟೇ ಹಾರಾಡಲಿ ಹಿಂದೂಗಳ ಓಟ್ ಮಾರಾಟಕ್ಕೆ ಇಲ್ಲ ಎಂದು ತಿಳಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 1 / 5. Vote count: 1

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು