ಮಂಗಳೂರು: ಮಂಗಳೂರಿನ ಕಾವೂರಿನಲ್ಲಿ ವಿಜಯ ಸಂಕಲ್ಪ ಯಾತ್ರೆ ನಡೆಯಿತು. ಸಂಕಲ್ಪಯಾತ್ರೆಯ ಬಹಿರಂಗ ಸಭೆ ಯಲ್ಲಿಗೋವಾ ಸಿ ಎಂ ಪ್ರಮೋದ್ ಸಾವಂತ್, ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ , ಮಾಜಿ ಸಚಿವ ಈಶ್ವರಪ್ಪ ಪಾಲ್ಗೊಂಡರು.
ಈ ವೇಳೆ ಮಾತನಾಡಿ ಶಾಸಕ ಭರತ್ ಶೆಟ್ಟಿ ರಾಜ್ಯದಲ್ಲಿ ಅಭಿವೃದ್ದಿಯ ಪರ್ವ ಆರಂಭವಾಗಿದೆ ದೇಶವೇ ತಿರುಗಿ ನೋಡುವಂತೆ ಕರ್ನಾಟಕ ಅಭಿವೃದಿ ಯಾಗಿದೆ. ಸಿದ್ದರಾಮಯ್ಯ ಸರ್ಕಾರ ರಾಜ್ಯದಲ್ಲಿದ್ದಾಗ ಹಿಂದುಗಳ ಸರಣಿ ಕೊಲೆ ನಡೆಯಿತು. ಈ ಕೊಲೆಗಳ ಹಿಂದಿರುವ ಪಿ ಎಫ್ ಐ ಮುಖಂಡರನ್ನು ಪೊಲೀಸರು ಬಂಧಿಸಿದ್ದರು.
ಆದರೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಪಿಎಫ್ ಐ ಕೊಲೆಗಡುಕರನ್ನು ಜೈಲಿನಿಂದ ಬಿಡುಗಡೆ ಮಾಡಿತು. ಅವರ ಮೇಲಿದ್ದ ಕೇಸ್ ಗಳನ್ನು ಹಿಂಪಡೆಯಲಾಯಿತು. ಭಯೋತ್ಪಾದಕ ಸಂಘಟನೆಯಾದಂತ ಪಿ ಎಫ್ ಐ ಬ್ಯಾನ್ ಮಾಡಿದ್ದು ಗುಂಡಿಗೆಯ ಬಿಜೆಪಿ ಸರ್ಕಾರ. ಉತ್ತರ ಕ್ಷೇತ್ರದಲ್ಲಿ ಕಾಂಗ್ರೆಸ್ ನ 2 ಬಾವಲಿಗಳು ಹಾರಾಡುತ್ತಿವೆ. ಒಂದು ಬಾವ ಮತ್ತೊಂದು ಅಲಿ ಬಾವ-ಅಲಿ.
ಚುನಾವಣೆ ಹತ್ತಿರ ಬಂದಾಗ ಹೊಸ ಹೊಸ ವೇಷ ಹಾಕಿ ಬಾವಲಿಗಳು ಬರುತ್ತಿವೆ. ಒಬ್ಬ ಹಾಣದ ಮೇಲೆ ರಾಜಕಾರಣ ಮತ್ತೊಬ್ಬ ಚೆಕ್ ಬೌನ್ಸ್ ನಲ್ಲಿ ಹೆಸರು ಮಾಡಿದವ. ಟಿಕೆಟ್ ಗೆ ಎರಡು ಬಾವಲಿಗಳು ಹೊಡೆದಾಡಿ ಕೊಳ್ಳುತ್ತಿವೆ ಎಂದು ವ್ಯಂಗ್ಯವಾಡಿದರು. ಈ ಬಾವಲಿಗಳು ಎಷ್ಟೇ ಹಾರಾಡಲಿ ಹಿಂದೂಗಳ ಓಟ್ ಮಾರಾಟಕ್ಕೆ ಇಲ್ಲ ಎಂದು ತಿಳಿಸಿದರು.