ಸುಬ್ರಹ್ಮಣ್ಯ : ಸುಬ್ರಹ್ಮಣ್ಯ ಸಮೀಪ ಕಾಡಾನೆಯೊಂದು ಕಾಡಿನಿಂದ ಹೆದ್ದಾರಿ ದಾಟಿ ನಾಡಿಗಿಳಿದ ಘಟನೆ ಶುಕ್ರವಾರ ಸಂಜೆ ವೇಳೆ ನಡೆದಿದೆ.
ಸುಬ್ರಹ್ಮಣ್ಯ – ಗುತ್ತಿಗಾರು – ಸುಳ್ಯ ಸಂಪರ್ಕ ರಾಜ್ಯ ಹೆದ್ದಾರಿಯ ನಡುಗಲ್ಲು ಸಮೀಪದ ಬಸ್ ತಂಗುದಾನದ ಬಳಿ ಕಾಡಾನೆ ಕಾಡಿನಿಂದ ಇಳಿದು ರಸ್ತೆ ದಾಟಿ ಕೆಳ ಭಾಗದ ತೋಟಕ್ಕೆ ತೆರಳಿದೆ. ಇದೇ ಸಂದರ್ಭದಲ್ಲಿ ವಾಹನಗಳು ರಸ್ತೆ ದಾಟುತ್ತಿದ್ದರೂ ಕಾಡಾನೆ ಸ್ವಲ್ಪ ಹೊತ್ತು ರಸ್ತೆ ಬದಿ ನಿಂತು ಬಳಿಕ ತೋಟದ ಕಡೆ ತೆರಳಿದೆ.