News Karnataka Kannada
Sunday, April 28 2024
ಮಂಗಳೂರು

ಹಿರಿಯ ಗಾಂಧಿವಾದಿ ಡಾ. ಎಸ್. ಎನ್. ಸುಬ್ಬರಾವ್ ಸ್ಮಾರಕಕ್ಕೆ ಧರ್ಮಸ್ಥಳದಿಂದ ನೇತ್ರಾವತಿ ನದಿಯ ಪುಣ್ಯ ಜಲ ಹಾಗೂ ಮೂರು ಹಿಡಿ ಮಣ್ಣು

Dharmashala
Photo Credit :

ಬೆಳ್ತಂಗಡಿ: ಗಾಂಧಿ ಶಾಂತಿ ಪ್ರತಿಷ್ಠಾನದ ರಾಷ್ಟ್ರೀಯ ಯುವ ಯೋಜನೆ ರೂವಾರಿ ಹಾಗೂ ಹಿರಿಯ ಗಾಂಧಿವಾದಿ ಡಾ. ಎಸ್.ಎನ್. ಸುಬ್ಬರಾವ್ ಅವರ ಸ್ಮಾರಕವನ್ನು ಮಧ್ಯ ಪ್ರದೇಶದ ಮೊರೆನಾ ಜಿಲ್ಲೆಯ ಚಂಬಲ್ ಕಣಿವೆಯಲ್ಲಿ ನಿರ್ಮಿಸಲು ಯೋಜಿಸಿದ್ದು ಧರ್ಮಸ್ಥಳದಲ್ಲಿ ಸೋಮವಾರ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರಿಂದ ಆಶೀರ್ವಾದಪೂರ್ವಕ ನೇತ್ರಾವತಿ ನದಿಯ ಪುಣ್ಯ ಜಲ ಹಾಗೂ ಮೂರು ಹಿಡಿ ಮಣ್ಣನ್ನು ಬೆಂಗಳೂರಿನ ಡಾ. ವಿ. ಪ್ರಶಾಂತ ಮತ್ತು ಬಳಗದವರು ಪಡೆದರು.

ದೇಶದ ಹಿರಿಯ ಗಾಂಧಿವಾದಿಯಾಗಿದ್ದು ನಡೆದಾಡುವ ಗಾಂಧಿ ಎಂದೇ ಪ್ರಸಿದ್ಧರಾಗಿದ್ಧ ಡಾ. ಎಸ್.ಎನ್. ಸುಬ್ಬರಾವ್ ಶಿಸ್ತಿನ ಸಿಪಾಯಿಯಾಗಿ ಸರಳ ಜೀವನ ನಡೆಸುತ್ತಿದ್ದರು. ತಮ್ಮ 92ನೆ ವಯಸ್ಸಿನಲ್ಲಿ 2021ರ ಅಕ್ಟೋಬರ್ 27ರಂದು ಅವರು ರಾಜಸ್ಥಾನದ ಜೈಪುರದಲ್ಲಿ ನಿಧನರಾದರು. ಮಧ್ಯಪ್ರದೇಶದ ಮೊರೆನಾ ಜಿಲ್ಲೆಯ ಚಂಬಲ್ ಕಣಿವೆಯಲ್ಲಿರುವ ಮಹಾತ್ಮಾ ಗಾಂಧಿ ಸೇವಾಶ್ರಮದ ಆವರಣದಲ್ಲಿ ಅವರ ಅಂತ್ಯಸಂಸ್ಕಾರವನ್ನು ನಡೆಸಲಾಯಿತು.

2022ರ ಫೆಬ್ರವರಿ 7 ರಂದು ಅವರ 93ನೆ ಹುಟ್ಟುಹಬ್ಬವನ್ನು ಆಚರಿಸಿ ಅಲ್ಲಿ ಒಂದು ಪುತ್ಥಳಿ ಮತ್ತು ಭವ್ಯ ಸಮಾಧಿ ನಿರ್ಮಿಸಲು ಯೋಜಿಸಲಾಗಿದೆ. ದೇಶದ ವಿವಿಧ ಸ್ಥಳಗಳಲ್ಲಿ ಡಾ. ಎಸ್.ಎನ್. ಸುಬ್ಬರಾವ್ ರಾಷ್ಟ್ರೀಯ ಯುವ ಶಿಬಿರಗಳನ್ನು ಆಯೋಜಿಸಿದ್ದು ಅಲ್ಲಿಂದ ಸ್ಮಾರಕ ನಿರ್ಮಾಣಕ್ಕೆ ಪವಿತ್ರ ಜಲ ಮತ್ತು ಮಣ್ಣು ಸಂಗ್ರಹಿಸಲಾಗುತ್ತಿದೆ. ಧರ್ಮಸ್ಥಳದಲ್ಲಿ ಕೂಡಾ ಡಾ. ಎಸ್.ಎನ್ ಸುಬ್ಬರಾವ್ ರಾಷ್ಟ್ರೀಯ ಯುವ ಶಿಬಿರ ಆಯೋಜಿಸಿದ್ದು ಪವಿತ್ರ ನೇತ್ರಾವತಿ ನದಿಯಿಂದ ಪುಣ್ಯಜಲ ಮತ್ತು ಮೂರು ಹಿಡಿ ಮಣ್ಣನ್ನು ಹೆಗ್ಗಡೆಯವರ ಆಶೀರ್ವಾದಗಳೊಂದಿಗೆ ರಾಷ್ಟ್ರೀಯ ಯುವ ಯೋಜನೆಯ ರಾಜ್ಯ ಸಂಯೋಜಕ ಡಾ. ವಿ. ಪ್ರಶಾಂತ್ ಮತ್ತು ಬಳಗದವರು ಸೋಮವಾರ ಪಡೆದುಕೊಂಡರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು