ಬೆಳ್ತಂಗಡಿ: ಗಾಂಧಿ ಶಾಂತಿ ಪ್ರತಿಷ್ಠಾನದ ರಾಷ್ಟ್ರೀಯ ಯುವ ಯೋಜನೆಯ ರೂವಾರಿ ಹಾಗೂ ಹಿರಿಯ ಗಾಂಧಿವಾದಿ ಕೀತಿಶೇಷ ಡಾ. ಎಸ್.ಎನ್. ಸುಬ್ಬರಾವ್ ಅವರ ಸ್ಮಾರಕವನ್ನು ಮಧ್ಯಪ್ರದೇಶದ ಮೊರೆನಾ ಜಿಲ್ಲೆಯ ಚಂಬಲ್ ಕಣಿವೆಯಲ್ಲಿ ನಿರ್ಮಿಸಲಿದ್ದು ಅವರು ರಾಷ್ಟ್ರೀಯ ಯುವ ಶಿಬಿರಗಳನ್ನು ನಡೆಸಿದ್ದ ಸ್ಥಳಗಳಿಂದ ಪುಣ್ಯ ಜಲ ಮತ್ತು ಮೂರು ಹಿಡಿ ಮಣ್ಣನ್ನು ಸಂಗ್ರಹಿಸಲಾಗುತ್ತಿದೆ.
ಡಾ. ಎಸ್.ಎನ್. ಸುಬ್ಬರಾವ್ ಅವರು ಧರ್ಮಸ್ಥಳದಲ್ಲಿಯೂ ರಾಷ್ಟ್ರೀಯ ಯುವ ಶಿಬಿರವನ್ನು ನಡೆಸಿದ್ದು ಅವರ ಸ್ಮಾರಕಕ್ಕೆ ನೇತ್ರಾವತಿ ನದಿಯ ಪುಣ್ಯ ಜಲ ಮತ್ತು ಮೂರು ಹಿಡಿ ಮಣ್ಣನ್ನು ಬೆಂಗಳೂರಿನ ಡಾ. ವಿ. ಪ್ರಶಾಂತ ಮತ್ತು ಬಳಗದವರು ಜ. 31 ರಂದು ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರಿಂದ ಆಶೀವಾದಪೂರ್ವಕ ಪಡೆಯುವರು.