News Karnataka Kannada
Friday, May 03 2024
ಮಂಗಳೂರು

ಭಗವಾನ್ ಶ್ರೀ ನಿತ್ಯಾನಂದ ಸಾಮೀಜಿ 30ನೇ ವರ್ಷದ ಪ್ರತಿಷ್ಠಾ ಮಹೋತ್ಸವ 

Bantwal
Photo Credit :

ಬಂಟ್ವಾಳ: ಇಲ್ಲಿನ ಬಡ್ಡಕಟ್ಟೆ ಶ್ರೀ ನಿತ್ಯಾನಂದ ಸ್ವಾಮಿ  ಭಜನಾ ಮಂದಿರದಲ್ಲಿ ಭಗವಾನ್   ಶ್ರೀ ನಿತ್ಯಾನಂದ ಸಾಮೀಜಿ ಇವರ 30ನೇ ವರ್ಷದ ಪ್ರತಿಷ್ಠಾ ಮಹೋತ್ಸವ ಮತ್ತು ಗೋವಿಂದ ಸ್ವಾಮೀಜಿ ಅವರ 13ನೇ ವರ್ಷದ ಪ್ರತಿಷ್ಠಾ ಮಹೋತ್ಸವ ಗುರುವಾರ ನಡೆಯಿತು.

ಬೆಳಿಗ್ಗೆ ಗಣಪತಿ ಹವನದ‌ ಬಳಿಕ  ಸ್ವಾಮೀಜಿದ್ವಯರ ಪಂಚಲೋಹ ವಿಗ್ರಹಕ್ಕೆ ಭಕ್ತರಿಂದ ಸ್ವತಃಸೀಯಾಳಾ ಭಿಷೇಕ ನಡೆಯಿತು.    ಶ್ರೀ ರಾಮ ಕ್ಷೇತ್ರ ಕನ್ಯಾಡಿಯ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಸಹಿತ ನೂರಾರು ಮಂದಿ ಶ್ರೀ ನಿತ್ಯಾನಂದ ಮತ್ತು ಶ್ರೀ ಗೋವಿಂದ ಸ್ವಾಮೀಜಿದ್ವಯರ ವಿಗ್ರಹಕ್ಕೆ ಸೀಯಾಳಾಭಿಷೇಕ ಗೈದು ಪುನೀತರಾದರು.

ಮಧ್ಯಾಹ್ನ ಮಹಾಪೂಜೆಯ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ಹಾಗೂ  ಸಂಜೆ  ರಜತ ಪಲ್ಲಕಿಯಲ್ಲಿ‌ ಮಂದಿರದಿಂದ ಭಾಮಿ ಜಂಕ್ಷನ್ ವರೆಗೆ  ಶ್ರೀಗಳ ವಿಗ್ರಹದ ಪೇಟೆ ಸವಾರಿ ನಡೆಯಿತು.ನಂತರ ಆದೇ ರಸ್ತೆಯಲ್ಲಿ ವಾಪಾಸ್ ಬಂದು ಮಂದಿರದ ಮುಂಭಾಗ ನೇತ್ರಾವತಿ ನದಿಯಲ್ಲಿ ಅವಭೃತ ಸ್ನಾನ ನೆರೆವೇರಿತು.

ಈ ಸಂದರ್ಭದಲ್ಲಿ ಅಧ್ಯಕ್ಷ ಯೋಗೀಶ್ ಸಪಲ್ಯ , ಪ್ರಮುಖರಾದ  ಗಜೇಂದ್ರ ಪ್ರಭು, ದಿನೇಶ್ ಭಂಡಾರಿ, ಹರೀಶ್ ಬಂಟ್ವಾಳ, ಬೋಜ ಕುಲಾಲ್, ಗಿರಿಧರ್, ಸತೀಶ್ ಸಪಲ್ಯ, ಉದಯ್ ಕುಮಾರ್ ಮಂಡಾಡಿ, ಶ್ರೀನಿವಾಸ ಸಪಲ್ಯ, ಸುರೇಶ್ ಬಂಟ್ವಾಳ,ಜಯಪ್ರಕಾಶ್ ಜಕ್ರಿಬೆಟ್ಟು, ಗೋಪಾಲಕೃಷ್ಣ ಬಡ್ಡಕಟ್ಟೆ, ಜಗನ್ನಾಥ ಕೆ.ತುಂಬೆ ಮತ್ತಿತರರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
153
Mounesh V

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು