News Karnataka Kannada
Sunday, April 28 2024
ಮಂಗಳೂರು

ಸ್ವಾತಂತ್ರ‍್ಯದ ಇತಿಹಾಸ ಸಾರಿದ “ಸಮನ್ವಯ ಕವಿ ಸಮ್ಮೇಳನ”

Ujire (3)
Photo Credit :

ಅಖಿಲ ಭಾರತ ಸಾಹಿತ್ಯ ಪರಿಷತ್ ಅಧಿವೇಶನದಲ್ಲಿ ಬಹುಭಾಷಾ ಕವಿಗೋಷ್ಟಿ

ಉಜಿರೆ ಮಾ ೨೦: ಅಖಿಲ ಭಾರತೀಯ ಸಾಹಿತ್ಯ ಪರಿಷದ್ ವತಿಯಿಂದ ಉಜಿರೆಯ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ನಡೆದ ನುಡಿಸಾಮ್ರಾಜ್ಯದಲ್ಲಿ ಸ್ವರಾಜ್ಯ ೩ನೆಯ ರಾಜ್ಯ ಅಧಿವೇಶನದ ‘ಸಮನ್ವಯ ಕವಿ ಸಮ್ಮಿಲನ’ ಕಾರ್ಯಕ್ರಮ ಭಾನುವಾರದಂದು ಜರುಗಿತು. ಕವಿಗೋಷ್ಠಿಯಲ್ಲಿ ಒಟ್ಟು ೧೮ ಕವಿಗಳು ಕನ್ನಡ, ತುಳು, ತೆಲುಗು, ಕೊಡವ, ಮಲಯಾಳಂ ಮರಾಠಿ, ಅರೆಭಾಷೆ, ಸಂಸ್ಕೃತ ಮತ್ತು ಕೊಂಕಣಿ ಭಾಷೆಗಳಲ್ಲಿ ಸ್ವರಚಿತ ಕವನ ವಾಚಿಸಿದರು. ಸ್ವಾತಂತ್ರಯ -ಸ್ವರಾಜ್ಯ ಎಂಬ ಮೂಲ ಆಶಯವನ್ನು ಬಿಂಬಿಸಿದ ಕವನಗಳು ಸಾಹಿತ್ಯಾಸಕ್ತರಿಗೆ ಮುದನೀಡಿದವು.

ತುಳು ಭಾಷಾ ಕವಯಿತ್ರಿ ಅನಿತಾ ಪೂಜಾರಿ ‘ಅಕ್ಷರ’ ಎಂಬ ಶೀರ್ಷಿಕೆಯಡಿ ಕವನ ವಾಚಿಸಿದರು. ಅಕ್ಷರವು ರಕ್ತಕ್ಕಿಂತಲೂ ಹರಿತವಾದುದು. ಅಕ್ಷರವು ಶುದ್ಧ ಸಮಾಜವನ್ನು ನಿರ್ಮಿಸುತ್ತದೆ. ಅಕ್ಷರದೊಂದಿಗೆ ನುಡಿ ಸಾಮ್ರಾಜ್ಯವನ್ನು ನಿರ್ಮಿಸಬೇಕು ಎಂಬ ಸಾರ ಅವರ ಕವನದಲ್ಲಿ ಧ್ವನಿಸಿತ್ತು . ಅವಧಾನಿ ಸೂರ್ಯ ಹೆಬ್ಬಾರ್, ಸಂಸ್ಕೃತ ಭಾಷೆಯಲ್ಲಿ ಸ್ವಾತಂತ್ರ‍್ಯ ಮತ್ತು ರಾಷ್ಟ್ರ ರಕ್ಷೆಯ ಆಶಯವನ್ನು ಬಿಂಬಿಸುವ ಕವಿತೆಯನ್ನು ವಾಚಿಸಿದರು. ಭಾರತಕ್ಕೆ ಬ್ರಿಟಿಷರು ಬರುವ ಮುನ್ನ ಹೇಗಿತ್ತು ಬ್ರಿಟಿಷರು ಭಾರತವನ್ನು ಯಾವ ಸ್ಥಿತಿಗೆ ತಲುಪಿದ್ದರು ಎಂಬುದು ಇವರ ಕವನದ ಭಾವಾರ್ಥವಾಗಿತ್ತು.

ನಮ್ಮಲ್ಲಿರುವ ವೈಮನಸುಗಳನ್ನು ಮರೆತು ನಾವೆಲ್ಲರು ಭಾರತೀಯರು ಎಂಬ ಭಾವದೊಂದಿಗೆ ಒಂದಾಗಿರಬೇಕು. ಕೈಗಳನ್ನು ಬೆಸೆದು ನಡೆಯುವಾಗ ಕಿವಿಯಲ್ಲಿ ವಂದೇ ಮಾತರಂ ಗೀತೆ ಮೊಳಗುತಿರಬೇಕು ಎಂಬುದು ಕವಯತ್ರಿ ಮೀನಾಕ್ಷಿ ರಾಮಚಂದ್ರರವರ ಮಲಯಾಳಂ ಭಾಷೆಯ ‘ಅಮ್ಮನೊಂದಿಗೆ ಒಂದು ಯಾತೆ’್ರ ಎಂಬ ಕವಿತೆಯ ಸತ್ವವಾಗಿತ್ತು.
ಸುಜಾತ ಹೆಗಡೆ, ತನ್ಮಯಿ ಪ್ರೇಮಕುಮಾರಿ, ವೆಂಕಟೇಶ್ ನಾಯಕ್, ಶ್ರೀವಿದ್ಯಾ, ಸೋಮಶೇಖರ ಕೆ ತುಮಕೂರು, ಪೂರ್ಣಿಮಾ ಸುರೇಶ್, ಹೃತ್ಪೂರ್ವಕ ಕೋರ್ನ, ಚಿನ್ಮಯಿ ಬೆಂಗಳೂರು, ಸುಭಾಷಿಣಿ, ಅಣ್ಣಪ್ಪ ಅರಬಗಟ್ಟೆ, ಸುಷ್ಮಾ, ಗುರುಪುತ್ರ, ಸ್ನೇಹ ಫಾತರಫೇಕರ, ಮೀನಾಕ್ಷಿ ರಾಮಚಂದ್ರ ಮತ್ತ ಪರಿಣಿತ ರವಿ ತಮ್ಮ ಕವಿತೆಗಳನ್ನು ವಾಚಿಸಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸುಮಾ ವಸಂತ ಸಾವಂತ್ ಮಾತನಾಡಿ, ಕಾವ್ಯದ ಮೂಲಕ ಸಮಾಜಿಕ ಜಾಗೃತಿ ಮೂಡಿಸಬಹುದು, ಭಾಷಣಗಳಿಗಿಂತ ಕವಿತೆ ಜನರನ್ನು ಬೇಗ ತಲುಪುತ್ತದೆ. ಸನಾತನ ಧರ್ಮ ಮತ್ತು ಸರ್ವಜನಾಂಗದ ತೊಟ್ಟಿಲಾಗಿರುವ ಭಾರತ ಕವಿಗಳ ನಾಡಾಗಿದ್ದು ಪ್ರತಿ ಇತಿಹಾಸವೂ ಕವಿಗಳ ಮೂಲಕವೇ ದಾಖಲೆಗೊಂಡಿದೆ ಎಂದರು. ಸಮಾನ ಭಾಷೆಗಳ ಸಾಕ್ಷೀಕರಣದ ಸಮನ್ವಯವಾಗಿ ಕವಿಗೋಷ್ಠಿ ಜರುಗಿತು. ಕಾರ್ಯಕ್ರಮವನ್ನು ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ನ ಬೆಂಗಳೂರು ಮತ್ತು ತುಮಕೂರು ವಿಭಾಗದ ಸಂಯೋಜಕ ತಿಮ್ಮಣ್ಣ ಭಟ್ ನಿರೂಪಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು