ಪುಣಚ ಗ್ರಾಮದ ನಾಟೆಕಲ್ಲು ನವಗ್ರಾಮ ನಿವಾಸಿ ಲತಾ ಗಂಭೀರ ಗಾಯಗೊಂಡ ಮಹಿಳೆಯಾಗಿದ್ದು, ಸಮೀಪದ ಮನೆಯ ವಿಟ್ಲ ಸಮುದಾಯ ಆಸ್ಪತ್ರೆಗೆ ಕರೆತಂದಿದ್ದು, ಸೆಂಟ್ರಿಂಗ್ ಶೇಖರ ಯಾನೆ ಶೇಖರ ಪೂಜಾರಿ ಇರಿದ ಆರೋಪಿಯಾಗಿದ್ದಾನೆ.
ಆರೋಪಿ ಮಹಿಳೆಯ ನೆರೆಮನೆಯ ಲ್ಲಿಯೇ ವಾಸಿಸುತ್ತಿದ್ದು ವೈಯಕ್ತಿಕ ವಿಚಾರದಲ್ಲಿ ಇಬ್ಬರೊಳಗೆ ಮಾತಿನ ಜಗಳ ಆರಂಭವಾಗಿದ್ದು, ಅಮಲು ಸೇವಿಸಿದ್ದ ಆರೋಪಿ ಕೋಪೋದ್ರಿಕ್ತ ನಾಗಿ ಒಮ್ಮಿಂದೊಮ್ಮೆಲೇ ಸಾರ್ವಜನಿಕ ಸ್ಥಳದಲ್ಲಿ ಮಾರಾಕಾಯುಧದಿಂದ ಮಹಿಳೆಯ ಕುತ್ತಿಗೆ,ಕೈಗಳಿಗೆ ಹಲ್ಲೆ ನಡೆಸಿದ್ದಾನೆ. ಗಂಭೀರ ಸ್ಥಿತಿಯಲ್ಲಿದ್ದ ಗಾಯಾಳುವನ್ನು ಫ್ರೆಂಡ್ಸ್ ವಿಟ್ಲ ಅಂಬ್ಯುಲೆನ್ಸ್ ನಲ್ಲಿ ವಿಟ್ಲ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ವಿಟ್ಲ ಪೊಲೀಸರು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.