News Karnataka Kannada
Monday, April 29 2024
ಮಂಗಳೂರು

ವಾರಕ್ಕೊಂದು ದಿನ ನೈತಿಕ ಶಿಕ್ಷಣ: ಸಚಿವ ನಾಗೇಶ್

Bc Nagesh
Photo Credit : News Kannada

ಬಂಟ್ವಾಳ: ಮಕ್ಕಳ ವಿಕಸನಕ್ಕಾಗಿ ನರೇಂದ್ರಮೋದಿಯವರ ಪ್ರಯತ್ನದ ಫಲವಾಗಿ  ಏಕರೂಪ ಭಾರತೀಯ ಶಿಕ್ಷಣ ನೀತಿಯನ್ನು ದೇಶದ 20 ಸಾವಿರ 1 ಮತ್ತು‌2 ನೇ ತರಗತಿಗಳಲ್ಲಿ ಜಾರಿಗೊಳಿಸಲಾಗುವುದು ಎಂದ ಶಿಕ್ಷಣ ಸಚಿವ ನಾಗೇಶ್ ಅವರು, ಭಾರತೀಯ ಶಿಕ್ಷಣ ಪದ್ದತಿ ಭಾರತವನ್ನು ಸ್ವಾವಲಂಬಿಯನ್ನಾಗಿಸಿದ್ದು, ಚಾರಿತ್ರ್ಯ ನಿರ್ಮಾಣಕ್ಕೆ ಶಿಕ್ಷಣ ಮುಖ್ಯವಾಗಿದೆ ಎಂದರು.

ಡಿಜಿಟಲ್ ಲೈಬ್ರರಿ, ಶಾಲಾ ವೆಬ್ ಸೈಟನ್ನು   ಉದ್ಟಾಟನೆಗೈದ  ರಾಜ್ಯ ಶಿಕ್ಷಣ ಸಚಿವರಾದ ಬಿ.ಸಿ.ನಾಗೇಶ್ ಅವರು ಉದ್ಘಾಟಿಸಿ ಮಾತನಾಡಿ, ರಾಜ್ಯದ ಎಲ್ಲಾ ಶಾಲೆಗಳಲ್ಲಿ ವಾರಕ್ಕೊಂದು ದಿನ  ನೈತಿಕ ಶಿಕ್ಷಣವನ್ನು ಜಾರಿಗೊಳಿಸುವ ಚಿಂತನೆ ಇದೆ ಎಂದರು.

ಬಂಟ್ವಾಳ ಶಾಸಕ  ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ,ಹಳ್ಳಿಯ ಪರಿಸರದಲ್ಲಿ ಕಲಿತ ಮಕ್ಕಳು ಶ್ರೀಮಂತರು ಪುಣ್ಯವಂತರು. ಬಂಟ್ವಾಳ ಕ್ಷೇತ್ರದಲ್ಲಿರುವ ಶಿಕ್ಷಕ,ಶಿಕ್ಷಕಿಯರ ಕೊರತೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಶಿಕ್ಷಣ ಸಚಿವರಲ್ಲಿ ಮನವಿ ಮಾಡಿದರು.

ಭಾರತ ಸಂವಿಧಾನ ವಿಚಾರವಾಗಿ ಕುಡುಚಿ ಶಾಸಕ  ಪಿ. ರಾಜೀವ್ ದಿಕ್ಸೂಚಿ ಭಾಷಣಗೈದು,ದಡ್ಡಲಕಾಡು ಸರಕಾರಿ ಆಂಗ್ಲ ಮಾಧ್ಯಮ  ಶಾಲೆ ನಮ್ಮೆಲ್ಲರ‌ ಕಣ್ಣು ತೆರೆಸಿದೆ.ಸರಕಾರಿ ಶಾಲೆಗಳ ಅಭಿವೃದ್ಧಿ ಗಾಗಿ ತಾನು ರಾಜಕಾರಣದಲ್ಲಿರುವವರೆಗೆ ತನ್ನ ವೇತನದ ಆರ್ಧ ಭಾಗವನ್ನು ಮೀಸಲಿಡುವುದಾಗಿ ಭರವಸೆಯಿತ್ತರು.

ಅಭಿವೃದ್ಧಿ ಪರ,ಕ್ರಿಯಾಶೀಲ ಶಾಸಕರನ್ನು ಬಂಟ್ವಾಳ ಜನತೆ ಪಡೆದುಕೊಂಡಿದ್ದು, ಕ್ರಿಯಾತ್ಮಕ ಯೋಚನೆಯ ಮೂಲಕ ಕ್ಷೇತ್ರದ ಅಭಿವೃದ್ಧಿ ಗಾಗಿ ಅವರ ಶ್ರಮ ಅದ್ಬುತವಾಗಿದೆ ಎಂದು ಹೇಳಿದರು. ಅತಿಥಿಯಾಗಿದ್ದ  ವಿಧಾನ ಪರಿಷತ್ತಿನ ಸದಸ್ಯರಾದ ಎಸ್.ಎಲ್.ಭೋಜೆಗೌಡ ಮಾತನಾಡಿ, ಜನಪ್ರತಿನಿಧಿಗಳ, ಸರಕಾರಿ ಅಧಿಕಾರಿಗಳ,ಉದ್ಯಮಿಗಳ ಸಹಿತ ಗಣ್ಯರ ಮಕ್ಕಳು,ಮೊಮ್ಮಕ್ಕಳನ್ನು ಸರಕಾರಿ ಶಾಲೆಯಲ್ಲಿ ಶಿಕ್ಷಣ ಕಲಿಸಬೇಕು ಎಂದರು.

ಕಿಯೋನಿಕ್ಸ್ ನಿಗಮದ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ದ.ಕ.ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಎಂ., ಪಂಜಿಕಲ್ಲು ಗ್ರಾ.ಪಂ.ಅಧ್ಯಕ್ಚ ಸಂಜೀವ ಪೂಜಾರಿ, ಬಂಟ್ವಾಳ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ದೇವದಾಸ ಶೆಟ್ಟಿ,ಕೆಯುಡಬ್ಲ್ಯು ಎಸ್ ನ ನಿರ್ದೇಶಕಿ ಸುಲೋಚನಾ ಭಟ್ ಜಿ.ಕೆ., ಎಂಆರ್ ಪಿ ಎಲ್ ನ ಮೆನೇಜರ್ ಸಂಪತ್ ರೈ,ಮಾಜಿ ಮುಖ್ಯಮಂತ್ರಿಗಳ ವಿಶೇಷ  ಕರ್ತವ್ಯ ಅಧಿಕಾರಿ ಜಗನ್ನಾಥ ಬಂಗೇರ ನಿರ್ಮಲ್, ಬಂಟ್ವಾಳ ಮಂಡಲ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಬಂಟ್ವಾಳ  ತಹಶೀಲ್ದಾರ್ ರಶ್ಮೀ ಎಸ್.ಆರ್,  ದ.ಕ.ಜಿಲ್ಲಾ ಬಿಜೆಪಿ ಯುವಮೋರ್ಛಾ ಕಾರ್ಯದರ್ಶಿ ಸುದರ್ಶನ್ ಬಜ,ಉದ್ಯಮಿ ರಘು ಸಪಲ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಜ್ಙಾನೇಶ್ ಮೊದಲಾದವರು ವೇದಿಕೆಯಲ್ಲಿದ್ದರು. ಇದೇ ವೇಳೆ ದಡ್ಡಲಕಾಡು ಸ್ಥಾಪಕ ಶಿಕ್ಷಕ ಸಂಜೀವ ಗೌಡ,ಪಂಜಿಕಲ್ಲು ಗ್ರಾಪಂ ಪಿಡಿಒ ವಿದ್ಯಾ  ಅವರನ್ನು ಗೌರವಿಸಲಾಯಿತು.

ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಮಕ್ಕಳ ನೃತ್ಯ ಹಾಗೂ ಉಮೇಶ್ ಮಿಜಾರ್ ತಂಡದಿಂದ ತೆಲಿಕೆದ ಗೊಂಚಿಲ್ ಕಾರ್ಯಕ್ರಮ ನಡೆಯಿತು. ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಪ್ರಕಾಶ್ ಅಂಚನ್ ಪ್ರಸ್ತಾವಿಸಿ,ಸ್ವಾಗತಿಸಿದರು. ಪ್ರೌಢಶಾಲೆಯ ಎಸ್‌ಡಿಎಂಸಿ ಕಾರ್ಯಾಧ್ಯಕ್ಷ ಪುರುಷೋತ್ತಮ ಅಂಚನ್ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯ ರಮಾನಂದ ವಂದಿಸಿದರು.ಶಿಕ್ಷಕಿಯರಾದಅನಿತಾ,ಭವ್ಯಶ್ರೀ, ನೇತ್ರ ಕಾರ್ಯಕ್ರಮ ನಿರೂಪಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
153
Mounesh V

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು