ಬಂಟ್ವಾಳ: ಮಾಜಿ ಸಚಿವ ಬಿ.ರಮಾನಾಥ ರೈ ಅವರ ನೇತೃತ್ವದಲ್ಲಿ ಸೌಹಾರ್ದ ಇಫ್ತಾರ್ ಕೂಟವು ಪಾಣೆಮಂಗಳೂರು ಸಾಗರ್ ಆಡಿಟೋರಿಯಂ ಹಾಲ್ ನಲ್ಲಿ ಎ.30 ರಂದು ಶನಿವಾರ ಸಂಜೆ ನಡೆಯಿತು.
ಮಾಜಿ ಸಚಿವ ಬಿ.ರಮಾನಾಥ ರೈ ಅವರು ಮಾತನಾಡಿ ವರ್ತಮಾನ ಕಾಲದಲ್ಲಿ ಸಾಮರಸ್ಯದ ಅಗತ್ಯವಿದ್ದು, ಇಫ್ತಾರ್ ಕೂಟ ಪ್ರಮುಖ ಪಾತ್ರವಹಿಸಲಿದೆ.
ಮನುಷ್ಯ ಮನುಷ್ಯನ ನಡುವಿನ ಅಪನಂಬಿಕೆ ಹೋಗಲಾಡಿಸಲು ಸೌಹಾರ್ದ ಮೂಡಿಸಬೇಕಾಗಿದೆ ಎಂದರು.ಅನೇಕ ಜಾತಿ , ಧರ್ಮ, ಭಾಷೆಗಳನ್ನೊಳಗೊಂಡ ದೇಶ ಭಾರತ ಇಲ್ಲಿ ಪ್ರತಿ ಧರ್ಮಕ್ಕೂ ಧಾರ್ಮಿಕ ಗ್ರಂಥವಿದೆ,ಆದರೆ ದೇಶಕ್ಕೆ ಪವಿತ್ರವಾದ ಗ್ರಂಥ ಸಂವಿಧಾನ ವಾಗಿದೆ, ಅದನ್ನು ವಿರೂಪಗೊಳಿಸುವ ಕೆಲಸ ಆಗಬಾರದು ಎಂದು ಅವರು ಹೇಳಿದರು .ಇಫ್ತಾರ್ ಕೂಟದಲ್ಲಿ ಭಾಗವಹಿಸಿದ ಪ್ರತಿಯೊಬ್ಬರಿಗೂ ವಿಶೇಷ ಧನ್ಯವಾದ ತಿಳಿಸಿದರು.
ಲೊರೆಟ್ಟೋ ಚರ್ಚ್ ನ ಧರ್ಮಗುರು ಫ್ರಾನ್ಸಿಸ್ ಕ್ರಾಸ್ತಾ ಅವರು ಮಾತನಾಡಿ, ವೈರತ್ವದಿಂದ ಸಮಾಜ ನಿರ್ಮಾಣ ಅಸಾಧ್ಯ ಎಂದು ಅವರು ಹೇಳಿದರು. ಮನುಷ್ಯತ್ವಕ್ಕೆ ಹೆಚ್ಚು ಬೆಲೆ ನೀಡಿದಾಗ ಧರ್ಮಕ್ಕೆ ಹೆಚ್ಚು ಶಕ್ತಿ ನೀಡುತ್ತದೆ ಎಂದು ಹೇಳಿದ ಅವರು ಸೌಹಾರ್ದ ಯುತ ಜೀವನಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುವಂತೆ ಅವರು ಹೇಳಿದರು.
ಪಕ್ರುದ್ದೀನ್ ಧಾರಿಮಿ ಕಾರ್ಯಕ್ರಮ ಕ್ಕೆ ಶುಭಹಾರೈಸಿ,ಇಫ್ತಾರ್ ಕೂಟ ಬಾಂಧವ್ಯ ಕ್ಕೆ ಬೆಲೆ ನೀಡುವ ವಿಶೇಷ ಕಾರ್ಯಕ್ರಮವಾಗಿದೆ , ಸಾಮಾರಸ್ಯ ಆಚರಣೆಗಳ ಮೂಲಕ ಆಗಬೇಕಾಗಿದೆ ಎಂದು ತಮ್ಮಣ್ಣ ಶೆಟ್ಟಿ ಶಂಭುಗ ಅವರು ಹೇಳಿದರು.
ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಪ್ರಮುಖರಾದ ಐವನ್ ಡಿ.ಸೋಜ, ಎಂ.ಎಸ್.ಮಹಮ್ಮದ್, ಮಮತಾ ಗಟ್ಟಿ, ಪಿಯೂಸ್ ಎಲ್ ರೋಡ್ರಿಗಸ್, ಸದಾಶಿವ ಉಳ್ಳಾಲ, ಡಾ!ರಘು ಗೌಡ, ಸರ್ವೋತ್ತಮ ಗೌಡ, ಕೆ.ಪಿ.ಸಿ.ಸಿ.ಸಂಯೋಜಕ ಕೃಷ್ಣಪ್ಪ,ಪೃಥ್ವಿ ರಾಜ್,ನಜೀರ್ ಬಜಾಲ್,ಬೇಬಿ ಕುಂದರ್, ಸುದೀಪ್ ಶೆಟ್ಟಿ, ಪ್ರಕಾಶ್ ಶೆಟ್ಟಿ ತುಂಬೆ,ಪದ್ಮಶೇಖರ್ ಜೈನ್ , ಭಾಸ್ಕರ್ ಮೊಯಿಲ, ಶಶಿದರ್ ಹೆಗ್ಡೆ, ಸತೀಶ್ ಕೆಡಿಂಜ, ಆಲ್ವಿನ್ ಡಿ.ಸೋಜ, ಮಲ್ಲಿಕಾ ಪಕಳ, ಸಾಹುಲ್ ಹಮೀದ್, ಪದ್ಮನಾಭ ಸಾಲಿಯಾನ್ ಮತ್ತಿತರರು ಉಪಸ್ಥಿತರಿದ್ದರು.