ಮಂಗಳೂರು : ಮೀನುಗಾರಿಕೆಗೆ ತೆರಳಿದ್ದ ಗಿಲ್ ನೆಟ್ ಬೋಟ್ ಮೂಗುಚಿ ಐವರು ಅಪಾಯಕ್ಕೆ ಸಿಲುಕಿದ ಘಟನೆ ಮಂಗಳೂರು ಹೊರವಲಯದ ಪಣಂಬೂರು ಕಡಲ ತೀರದಲ್ಲಿ ನಡೆದಿದೆ.
ಈ ಘಟನೆಯಲ್ಲಿ ಅವಘಡದಲ್ಲಿ ಓರ್ವ ಮೀನುಗಾರ ಸಮುದ್ರಪಾಲಾಗಿದ್ದು ,ನಾಲ್ವರನ್ನು ರಕ್ಷಿಸಲಾಗಿದೆ. ಮೀನುಗಾರ ಶರೀಫ್ ಸಮುದ್ರಪಾಲಾದ ದುರ್ದೈವಿ. ಅಬ್ದುಲ್ ಅಜೀಜ್, ಇಂತಿಯಾಜ್, ಸಿನಾನ್, ಫೈರೋಜ್ ಎಂಬವವರನ್ನು ರಕ್ಷಿಸಲಾಗಿದೆ. ಸದ್ಯ ಶರೀಫ್ ಗಾಗಿ ಹುಡುಕಾಟ ನಡೆದಿದ್ದು , ಸ್ಥಳೀಯರು ದೋಣಿಯನ್ನ ದಡಕ್ಕೆ ತಂದಿದ್ದಾರೆ.