News Karnataka Kannada
Monday, April 29 2024
ಮಂಗಳೂರು

ಶ್ರೀ ಬಾಹುಬಲಿ ಕ್ಷೇತ್ರ ಹಾಗೂ ಶ್ರೀ ಪಾರ್ಶ್ವನಾಥ ಸ್ವಾಮಿ ಬಸದಿಯ ಒಳಾಂಗಣ ಇಂಟರ್‌ಲಾಕ್ ಕಾಮಗಾರಿಗೆ ಭೂಮಿಪೂಜೆ

Bhumi Pooja
Photo Credit :

ಬೆಳ್ತಂಗಡಿ: ಇಲ್ಲಿಯ ಶ್ರೀ ಬಾಹುಬಲಿ ಕ್ಷೇತ್ರ ಹಾಗೂ ಶ್ರೀ ಪಾರ್ಶ್ವನಾಥ ಸ್ವಾಮಿ ಬಸದಿಯ ಒಳಾಂಗಣಕ್ಕೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ರೂ. ೧೫ ಲಕ್ಷ ಅನುದಾನದಡಿ ಅಳವಡಿಸಲಾಗುವ ಇಂಟರ್‌ಲಾಕ್ ಕಾಮಗಾರಿಗೆ   ಮುನಿಶ್ರೀ ೧೦೮ ಪುಣ್ಯನಂದಿ ಮಹಾರಾಜರ ಉಪಸ್ಥಿತಿಯಲ್ಲಿ ವೇಣೂರು ಗ್ರಾ.ಪಂ. ಅಧ್ಯಕ್ಷ ನೇಮಯ್ಯ ಕುಲಾಲ್ ಭೂಮಿಪೂಜೆಯನ್ನು ನೆರವೇರಿಸಿದರು.

ಶ್ರೀ ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿಯ ಕಾರ್ಯದರ್ಶಿ ಯಂ. ವಿಜಯರಾಜ ಅಧಿಕಾರಿ, ಕಾರ್ಯಾಕಾರಿಣಿ ಸದಸ್ಯರುಗಳಾದ ಡಾ| ಕೆ.ಆರ್. ಪ್ರಸಾದ್, ಪ್ರವೀಣ್ ಅಜ್ರಿ, ನವೀನ್‌ಚಂದ್ ಬಲ್ಲಾಳ್, ಮಹಾವೀರ ಜೈನ್ ಮೂಡುಕೋಡಿ, ವಿದ್ಯಾನಂದ ಕುಮಾರ್, ವೇಣೂರು ಗ್ರಾ.ಪಂ. ಸದಸ್ಯರುಗಳಾದ ಅರುಣ್ ಕ್ರಾಸ್ತ, ಸಂಭಾಷಿಣಿ ಉದಯಕುಮಾರ್, ಗುತ್ತಿಗೆದಾರರಾದ ಅರಿಹಂತ ಇಂಟರ್‌ಲಾಕ್ಸ್‌ನ ವಿಶ್ವಾಸ್ ಜೈನ್ ಪೆರಿಂಜೆ, ಗುಣಪಾಲ ಶೆಟ್ಟಿ, ಭರತ್‌ರಾಜ್ ಅಜ್ರಿ, ಪ್ರಮೋದ್ ಪಿ., ಮತ್ತಿತರರು ಉಪಸ್ಥಿತರಿದ್ದರು. ಪೂರ್ವಾಹ್ನ ಭಗವಾನ್ ಬಾಹುಬಲಿ ಸ್ವಾಮಿಗೆ ಪಾದಾಭಿಷೇಕ ನೆರವೇರಿಸಿ, ಬಾಹುಬಲಿ ಬೆಟ್ಟದ ಪುರೋಹಿತ ಚಂದ್ರನಾಥ ಇಂದ್ರ ಭೂಮಿಪೂಜೆಯ ವಿಧಿವಿಧಾನಗಳನ್ನು ನೆರವೇರಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು