ಬಂಟ್ವಾಳ : ಸೇವಾ ಬೆಳಕು ಸುಸ್ಥಿರ ಬದುಕು ಅಭಿಯಾನ ಕಾರ್ಯಕ್ರದಲ್ಲಿ ಸಮಾಜ ಸೇವಾ ಸಾಧಕರಾದ ಶೀನ ಶೆಟ್ಟಿ ಮತ್ತು ಕೃಷ್ಣ ಮೂಲ್ಯರ ಸೇವಾ ಕಥನ ಆಧಾರಿತ ‘ಅದ್ವಿತೀಯ’ ಕೃತಿ ಮಾ.6ರಂದು ಹೂಹಾಕುವ ಕಲ್ಲು ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಲೋಕಾರ್ಪಣೆಗೊಂಡಿತು.
ಕಾರ್ಯಕ್ರಮವನ್ನು ಶಾಸಕರು, ವಿಪಕ್ಷ ಉಪನಾಯಕರಾದ ಯು. ಟಿ ಖಾದರ್ ಉದ್ಘಾಟಿಸಿದರು. ಬಾಳೆಪುಣಿ ಜನಜೀವನದ ಅಧ್ಯಕ್ಷರಾದ ರಮೇಶ್ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ತುಮಕೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾದ ಪ್ರೊ. ನಿತ್ಯಾನಂದ ಬಿ. ಶೆಟ್ಟಿ ಅದ್ವಿತೀಯ ಕೃತಿಯ ಪರಿಚಯ ಮಾಡಿದರು.
ಅದ್ವಿತೀಯ ಕೃತಿಯನ್ನು ಚಾಮರಾಜನಗರದ ದೀನಬಂದು ಟ್ರಸ್ಟ್ ಕಾರ್ಯದರ್ಶಿ ಪ್ರೊ. ಈ. ಎಸ್ ಜಯದೇವ ಲೋಕಾರ್ಪಣೆಗೊಳಿಸಿದರು. ಈ ಕೃತಿಯನ್ನು ಕೃಷಿ ಪರಿಸರಾಸಕ್ತ ಲೇಖಕರು, ಉಪನ್ಯಾಸಕರಾದ ಡಾ. ನರೇಂದ್ರ ರೈ ದೇರ್ಲ ಬರೆದಿದ್ದು, ಮಂಗಳೂರು ಆಕೃತಿ ಆಶಯ ಪಬ್ಲಿಕೇಶನ್ಸ್ನಲ್ಲಿ ಮೂಡಿಬಂದಿದೆ.
ಮಧ್ಯಾಹ್ನ ಹೂಹಾಕುವ ಕಲ್ಲು ಶಾಲೆಯ ವಿದ್ಯಾರ್ಥಿಗಳಿಂದ ಜನಪದ ನೃತ್ಯ ಕಾರ್ಯಕ್ರಮ ಹಾಗೂ ಬಾಳೆ ಪುಣಿ, ನಲಿಪು ಜಾನಪದ ಕೂಟದಿಂದ ಜನಪದ ಹಾಡುಗಳ ಪದರಂಗಿತ ಕಾರ್ಯಕ್ರಮ ನಡೆಯಿತು. ಸಂಜೆ ಮುಡಿಪು, ಸ್ವಾತಿ ಸಂಗೀತ ಸಂಗಮದಿAದ ಸುಗಮ ಸಂಗೀತ ಕಾರ್ಯಕ್ರಮ ಜರಗಿತು.