News Karnataka Kannada
Thursday, May 02 2024
ಮಂಗಳೂರು

ಅಭಿಯಾನಿಯ ಹೋಟೆಲ್‌ಗೆ ತೆರಳಿ ಗೌರವ ಸ್ವೀಕರಿಸಿದ ಯು.ಟಿ.ಖಾದರ್

Ut Khadar
Photo Credit : News Kannada

ಬಂಟ್ವಾಳ : ಕರ್ನಾಟಕ ವಿಧಾನಸಭೆಯ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಅವರು ಮಂಗಳೂರಿನಿಂದ ಧರ್ಮಸ್ಥಳಕ್ಕೆ ತೆರಳುವ ವೇಳೆ ಬಂಟ್ವಾಳ ತಾಲೂಕಿನ ಜಕ್ರಿಬೆಟ್ಟು ಅಭಿಯಾನಿಯೊಬ್ಬರ ಹೋಟೆಲ್‌ಗೆ ತೆರಳಿ ಗೌರವ ಸ್ವೀಕರಿಸಿದರು.

ಪ್ರಸ್ತುತ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಘಟಕದ ಉಪಾಧ್ಯಕ್ಷರಾಗಿರುವ ದಿನೇಶ್ ಪೂಜಾರಿ ಅವರು ಖಾದರ್ ಅವರ ಅಪ್ಪಟ ಅಭಿಯಾನಿಯಾಗಿದ್ದು, ಅವರು ಶಾಸಕರಾದ ಪ್ರಾರಂಭದ ವರ್ಷಗಳಲ್ಲಿ ದಿನೇಶ್ ಅವರು ಶಾಸಕರ ಬೆಂಗಳೂರಿನ ನಿವಾಸದಲ್ಲಿ ಅಡುಗೆಯವರಾಗಿದ್ದರು.

ಪ್ರಸ್ತುತ ಜಕ್ರಿಬೆಟ್ಟಿನಲ್ಲಿ ಶ್ರೀ ದುರ್ಗಾ ಎಂಬ ಹೋಟೇಲ್ ನಡೆಸುತ್ತಿರುವ ದಿನೇಶ್ ಪೂಜಾರಿ ಅವರು ತನ್ನ ಹೋಟೇಲ್‌ನಲ್ಲಿ ಖಾದರ್ ಅವರ ಬೃಹತ್ ಪೋಟೋವನ್ನಿಟ್ಟಿದ್ದಾರೆ. ಹೀಗಾಗಿ ದಿನೇಶ್ ಅವರ ಮೇಲೆಯೂ ಖಾದರ್ ಅವರಿಗೆ ವಿಶೇಷ ಅಭಿಮಾನವಿದ್ದು, ಫೆ. 2ರಂದು ಧರ್ಮಸ್ಥಳಕ್ಕೆ ತೆರಳುವ ವೇಳೆ ಜಕ್ರಿಬೆಟ್ಟಿನಲ್ಲಿ ಅವರ ಹೋಟೇಲ್‌ಗೆ ತೆರಳಿ ಗೌರವ ಸ್ವೀಕರಿಸಿದರು. ಈ ವೇಳೆ ಮಂಗಳೂರು ತಾ.ಪಂ.ಮಾಜಿ ಅಧ್ಯಕ್ಷ ಮೊಹಮ್ಮದ್ ಮೋನು, ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ ಮೊದಲಾದವರು ಯು.ಟಿ.ಖಾದರ್ ಅವರ ಜತೆಗಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
153
Mounesh V

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು