News Karnataka Kannada
Monday, April 29 2024
ಮಂಗಳೂರು

ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ದ.ಕ.ಜಿಲ್ಲಾ ದಲಿತ್ ಸೇವಾ ಸಮಿತಿಯ ವತಿಯಿಂದ ಕಾಲ್ನಡಿಗೆ ಜಾಥ

New Project 2021 10 25t085343.075
Photo Credit :

ಬಂಟ್ವಾಳ:  ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ದ.ಕ.ಜಿಲ್ಲಾ ದಲಿತ್ ಸೇವಾ ಸಮಿತಿಯ  ವತಿಯಿಂದ ಬಿ.ಸಿ.ರೋಡಿನ ಮಿನಿವಿಧಾನಸೌಧ ಬಳಿಯಿಂದ ದ.ಕ.ಜಿಲ್ಲಾಧಿಕಾರಿ ಕಚೇರಿ ವರೆಗೆ ಕಾಲ್ನಡಿಗೆ ಜಾಥಕ್ಕೆ  ಭಾನುವಾರ ಮಧ್ಯಾಹ್ನ  ಚಾಲನೆ ನೀಡಲಾಯಿತು. ಈ ಸಂದರ್ಭ ಸುದ್ದಿಗಾರರೊಂದೊಗೆ ಮಾತನಾಡಿದ ಸಮಿತಿ  ಸ್ಥಾಪಕಾಧ್ಯಕ್ಷ ಬಿ.ಕೆ.ಸೇಸಪ್ಪ ಬೆದ್ರಕಾಡು ಅವರು  ಪ. ಜಾತಿ ,ಪಂಗಡದವರ ಮತ್ತು ಇತರ ಸಮುದಾಯದ ಕಲೋನಿಗಳಿಗೆ ಮೂಲಭೂತ ಸೌಕರ್ಯಗಳಲ್ಲಿ ಒಂದಾದ ‘ರಸ್ತೆ ಸಂಪರ್ಕ ಸಹಿತ  ಇತರ ಹಲವಾರು ಬೇಡಿಕೆಗಳನ್ನು ಇಟ್ಟುಕೊಂಡು ಈ ಕಾಲ್ನಡಿಗೆ ಜಾಥ ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು.

ನಮ್ಮ ಬೇಡಿಕೆ ಈಡೇರಿಸುವಂತೆ  ಸರಕಾರವನ್ನು ಒತ್ತಾಯಿಸಿ  ಜಿಲ್ಲಾಧಿಕಾರಿಯವರಿಗೆ ಸೋಮವಾರ ಮನವಿ ನೀಡಲಾಗುವುದು, ನಮ್ಮ ಯಾವ ಬೇಡಿಕೆಗೂ ಜಿಲ್ಲಾಧಿಕಾರಿಯಾಗಲಿ,ಜಿಲ್ಲೆಯ ಜನಪ್ರತಿನಿಧಿಗಳ್ಯಾರು  ಈವರೆಗೂ ಸ್ಪಂದಿಸದಿದ್ದು,    ಈ ಪ್ರತಿಭಟನೆಗೂ ಸೂಕ್ತ ಸ್ಪಂದನೆ ಸಿಗದಿದ್ದಲ್ಲಿ   ಮುಂಬರುವ ತಾ.ಪಂ.,ಜಿಪಂ.ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದೆವೆ ಎಂದರು.   ಎಂದವರು ತಿಳಿಸಿದರು.
ಸಮಿತಿ ಪ್ರಮುಖರಾದ ನಾಗೇಶ್ ಮಂಜನಾಡಿ,ಶ್ರೀಧರ ಮಂಜನಾಡಿ,ಸಂಜೀವ ಹೆಗ್ಗಡೆಕೋಡಿ, ಮಂಜನಾಡಿ ಸಂಜೀವ ಹೆಗಡಕೋಡಿ ಜಗದೀಶ್ ಮಂಜನಾಡಿ, ಎಂಆರ್.ಗೋಪಾಲ್ ಸಹಿತ ಐವತ್ತಕ್ಕು ಹೆಚ್ಚು ಮಂದಿ ಕಾಲ್ನಡಿಗೆ ಜಾಥದಲ್ಲಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
153
Mounesh V

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು