ಮಂಗಳೂರು : ಭಜರಂಗದಳ ಹಮ್ಮಿಕೋದಿದ್ದ ಸಭೆಯೊಂದರಲ್ಲಿ ಅನ್ಯ ಕೋಮಿನ ಬಗ್ಗೆ ಚೈತ್ರಾ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದರಿಂದ ಸಮಾಜದ ಸ್ಡಾಸ್ಥö್ಯ ಕದಡುವ ಯತ್ನವಾಗಿದೆ ಎಂದು ಆರೋಪಿಸಿ ಬೊಂಡಾಲ ಚಿಂತನ್ ಶೆಟ್ಟಿ ಎಂಬುವವರು ಪೊಲೀಸರಿಗೆ ದೂರು ನೀಡಿದ್ದಾರೆ.
ಚೈತ್ರಾ ಭಾಷಣ ಮಾಡುತ್ತ ಒಂದು ನಿರ್ಧಿಷ್ಟ ಕೋಮಿನ ಜನರನ್ನು ಕಾನೂನು ಬಾಹಿರ ಪದಗಳಿಂದ ನಿಂದಿಸಿದ್ದಾರೆ. ಅಷ್ಟೇ ಅಲ್ಲದೇ ಜನರನ್ನು ಆ ಕೋಮಿನ ವಿರುದ್ಧ ಎತ್ತಿಕಟ್ಟುವ ಪ್ರಯತ್ನ ಸಹ ಮಾಡಿದ್ದಾರೆ. ಇದರಿಂದ ಸಮಾಜದಲ್ಲಿ ಶಾಂತಿ ನಾಶವಾಗುತ್ತದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಬಂಟ ಸಮುದಾಯದ ಆಚರಣೆಗಳನ್ನು ರೌಡಿ ಪ್ರವೃತ್ತಿಗೆ ಹೋಲಿಸಿರುವುದು ಖಂಡನೀಯ ಎಂದು ತಿಳಿಸಿದ್ದಾರೆ.
ಇದೇ ಭಾಷಣದಲ್ಲಿ ಅವರು ಬಂಟ ಸಮುದಾಯದ ಕಾಂಗ್ರೆಸ್ ನಾಯಕರ ಮಗಳು ಮುಸ್ಲಿಂ ಯುವಕನೊಡನೆ ಪ್ರೇಮ ಸಂಬOಧವಿದೆ ಎಂದು ಹೇಳಿರುವುದು ಉದ್ದೇಶ ಪೂರಿತವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.