ಬಂಟ್ವಾಳ: ರೋಲರ್ ಸ್ಕೇಟಿಂಗ್ ಫೆಡರೇಶನ್ ಆಫ್ಇಂಡಿಯಾ ಸಂಸ್ಥೆಯು ನವದೆಹಲಿಯಲ್ಲಿ ಆಯೋಜಿಸಿದ 59ನೇ ರಾಷ್ಟ್ರೀಯ ಮಟ್ಟದ ರೋಲರ್ ಸ್ಟೇಟಿಂಗ್ ಚಾಂಪಿಯನ್ ಶಿಪ್ 2021-22 ರಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ ತನ್ಮಯ್ ಎಂ.ಕೊಟ್ಟಾರಿ ಎರಡು ಬೆಳ್ಳಿ ಪದಕ ಪಡೆದು, ಕರ್ನಾಟಕವೇ ಹೆಮ್ಮೆ ಪಡುವ ಸಾಧನೆ ಗೈದಿದ್ದಾನೆ.
ಮಂಗಳೂರು ದೇರೆಬೈಲು ಪ್ರಶಾಂತನಗರ ನಿವಾಸಿ ಮೋಹನ್ ಕೊಟ್ಟಾರಿ ಹಾಗೂ ಸುನಿತಾ ಮೋಹನ್ ದಂಪತಿಯ ಪುತ್ರನಾಗಿರುವ ತನ್ಮಯ್ ಪ್ರಸ್ತುತ ಮಂಗಳೂರಿನ ಕೆನರಾ ಸಿಬಿ ಎಸ್ ಇ ಹೈಸ್ಕೂಲ್ ನ 8ನೇ ತರಗತಿ ಯಲ್ಲಿ ವ್ಯಾಸಾಂಗ ಮಾಡುತ್ತಿದ್ದಾನೆ.
ತನ್ನ ಮೂರೂವರೆ ವರ್ಷದ ಪ್ರಾಯದಲ್ಲೇ ಕಾಲಿಗೆ ಚಕ್ರಕಟ್ಟಿ ಓಡುವ ಸ್ಕೇಟಿಂಗ್ ಎನ್ನುವ ಕ್ರೀಡೆಯತ್ತ ಒಲವು ಬೆಳೆಸಿಕೊಂಡ ತನ್ಮಯ್ ಈ ವರೆಗೆ ಜಿಲ್ಲಾಮಟ್ಟದಿಂಮದ ರಾಷ್ಟ್ರಮಟ್ಟದವರೆಗಿನ ವಿವಿಧ ಸ್ಪರ್ಧಾಕೂಟಗಳಲ್ಲಿ 75 ಕ್ಕೂ ಅಧಿಕ ಪದಕಗೆದ್ದಿದ್ದಾನೆ. ದಕ್ಷಿಣ ಕನ್ನಡ ಜಿಲ್ಲಾ ಮಟ್ಟದಲ್ಲಿ ಸತತ 6 ಬಾರಿ ಚಾಂಪಿಯನ್, 2 ಬಾರಿ ರಾಜ್ಯ ಮಟ್ಟದ ದಸರಾ ಸ್ಕೇಟಿಂಗ್ ಚಾಂಪಿಯನ್ನಲ್ಲಿ ಚಾಂಪಿಯನ್ಆದ ತನ್ಮಯ್ , ರಾಜ್ಯ ಹಾಗೂ ದಕ್ಷಿಣ ವಲಯ
ಮಟ್ಟದ ಸ್ಪರ್ಧೆಯಲ್ಲೂ ಚಾಂಪಿಯನ್ ಆಗಿ ತನ್ನ ಪ್ರತಿಭೆ ಪ್ರಕಟಿಸಿದ್ದಾನೆ.2017 ರ ಮೆ ತಿಂಗಳಿನಲ್ಲಿ ಪಾಂಡಿಚೇರಿಯಲ್ಲಿ ನಡೆದ ಆಲ್ಇಂಡಿಯಾ ಓಪನ್ ನ್ಯಾಶನಲ್ ಸ್ಕೇಟಿಂಗ್ ಚಾಂಪಿಯನ್ ಶಿಪ್ನಲ್ಲಿ 3 ಚಿನ್ನದಪದಕಪಡೆದು ರಾಷ್ಟ್ರೀಯ ಚಾಂಪಿಯನ್ ಆಗಿರುವುದು ತನ್ಮಯ್ ನ ಹೆಗ್ಗಳಿಕೆ.
ಈವರೆಗೆ ರಾಷ್ಟ್ರೀಯ ಮಟ್ಟದಲ್ಲಿ 3 _ಚಿನ್ನ, 2 ಬೆಳ್ಳಿ, ರಾಜ್ಯಮಟ್ಟದಲ್ಲಿ 16 ಹಾಗೂ ದಕ್ಷಿಣ ವಲಯ ಮಟ್ಟದಲ್ಲಿ 12 ಪದಕಗಳನ್ನು ಪಡೆದಿರುವ ತನ್ಮಯ್ ಇತ್ತೀಚೆಗೆ ನವದೆಹಲಿಯಲ್ಲಿ ನಡೆದ ಮಟ್ಟದ ಸ್ಪೀಡ್ ಸ್ಕೇಟಿಂಗ್ ಚಾಂಪಿಯನ್ ಶಿಪ್ ನಲ್ಲಿಯೂ 2 ಬೆಳ್ಳಿ ಪದಕಪಡೆದಿದ್ದು, ಓರ್ವ ಅಪ್ರತಿಮಸ್ಕೇಟಿಂಗ್ ಪಟುವಾಗಿ ಬೆಳೆಯುತ್ತಿದ್ದಾನೆ.
ಮಂಗಳೂರಿನ ಹೈ ಫ್ಲೈಯರ್ಸ್ ಸ್ಕೇಟಿಂಗ್ ಕ್ಲಬ್ ನಲ್ಲಿ ತರಬೇತುದಾರ ಮೋಹನ್ದಾಸ್ಕೆ ಇವರಲ್ಲಿ ತನ್ಮಯ್ ತರಬೇತಿಯನ್ನು ಪಡೆಯುತ್ತಿದ್ದು ಅಪ್ರತಿಮ ಸಾಹಸದ ಕನಸು ಹೊತ್ತಿದ್ದಾನೆ.ತನ್ಮಯ್ ನ ಹಂಬಲಗಳಿಗೆ ಬೆಂಬಲ ಸಿಗಲಿ, ಕನಸುಗಳೆಲ್ಲಾ ನನಸುಗಳಾಗಲಿ ಎನ್ನುವುದೇ ನಮ್ಮ. ಹಾರೈಕೆ…