ಬೆಳ್ತಂಗಡಿ: ಶಾಸಕ ಹರೀಶ ಪೂಂಜ ಅವರು ಪ್ರಧಾನಿ ಮೋದಿ ಅವರ ದೀರ್ಘಾಯುಷ್ಯ ಹಾಗೂ ಆರೋಗ್ಯಕ್ಕಾಗಿ ಧರ್ಮಸ್ಥಳ ಕ್ಷೇತ್ರದಲ್ಲಿ ಮಹಾ ಮೃತ್ಯುಂಜಯ ಹೋಮವನ್ನು ಮಾಡಲು ಸಂಕಲ್ಪಿಸಿದ್ದಾರೆ.
ಜ. 17 ರ ಸೋಮವಾರದಂದು ಶ್ರೀ ಮಂಜುನಾಥನ ಸನ್ನಿಧಿಯಲ್ಲಿ ಸಮಸ್ತ ಜನತೆಯ ಪರವಾಗಿ ಹೋಮ ನಡೆಯಲಿದೆ ಎಂದು ಶಾಸಕರ ಪ್ರಕಟಣೆ ತಿಳಿಸಿದೆ. ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಉಪಸ್ಥಿತರಿರಲಿದ್ದಾರೆ.