News Karnataka Kannada
Thursday, May 02 2024
ಮಂಗಳೂರು

ರಂಜಾನ್ ಉಪವಾಸ ಮತ್ತು ಝಕಾತ್ ಮಹತ್ವಗಳು – ವಿಚಾರ ವಿಮರ್ಶೆ

Ramz
Photo Credit :
ಮಂಗಳೂರು : ಇಸ್ಲಾಮ್ ಧರ್ಮದ ಪಂಚ ಸ್ತಂಭಗಳಲ್ಲೊಂದಾದ ರಮ್ಝಾನ್ ತಿಂಗಳ ಉಪವಾಸವು, ಉತ್ತಮ ಜೀವನ ಕ್ರಮವನ್ನು ಅನುಸರಿಸಲು  ತರಬೇತಿಯನ್ನು ನೀಡುವ ಮೂಲಕ, ಸ್ವ ನಿಯಂತ್ರಣದೊಂದಿಗೆ  ಉತ್ತಮ  ವ್ಯಕ್ತಿತ್ವವನ್ನು ನಿರ್ಮಿಸುವುದಲ್ಲದೆ, ಸಮಾಜದ ಬಡವರ ಮತ್ತು ದಮನಕ್ಕೊಳಪಟ್ಟವರ ಬಗ್ಗೆ ಕಾಳಜಿ ವಹಿಸಿ, ಸಮಸ್ತ ಮನುಕುಲದ ಅಭಿವೃದ್ಧಿಗೆ ಮತ್ತು ನ್ಯಾಯ ಪರಿಪಾಲನೆಗೆ ಉತ್ತೇಜಿಸುತ್ತದೆ.
ಹಾಗೆಯೇ ಝಕಾತ್ ಎಂಬ ಕಡ್ಡಾಯ ದಾನವು ಬಡವರ ಹಕ್ಕಾಗಿದ್ದು, ನಿರ್ದಿಷ್ಟ ಸಂಪತ್ತು ‌ಮತ್ತು ಆಸ್ತಿ ಹೊಂದಿದವರು ಝಕಾತನ್ನು  ಸರಿಯಾದ ವ್ಯವಸ್ಥೆಯೊಂದಿಗೆ ಬಡವರ ಮತ್ತು ಅಶಕ್ತರ ಅಭಿವೃದ್ಧಿಗೆ ಉಪಯೋಗಿಸಿದರೆ, ಭಿಕ್ಷಾಟನೆ ಮತ್ತು ದಾರಿದ್ರ್ಯ ತೊಲಗಿ  ಉತ್ತಮ ಸಮಾಜ ನಿರ್ಮಾಣ ಗೊಳ್ಳುತ್ತದೆ.
ಉಪವಾಸ ಮತ್ತು ದಾನಧರ್ಮವು  ಎಲ್ಲಾ ಧರ್ಮಗಳ ಅವಿಭಾಜ್ಯ ಅಂಗವಾಗಿದ್ದು, ಸಹೋದರ ಧರ್ಮಗಳ ಪ್ರತಿನಿಧಿಗಳ ಉಪಸ್ಥಿತಿಯೊಂದಿಗಿನ ವಿಚಾರವಿಮರ್ಶೆಯಿಂದಾಗಿ ಸಹಬಾಳ್ವೆ ಮತ್ತಷ್ಟು ಪಕ್ವತೆ ಗೊಳ್ಳುತ್ತದೆ ಎಂದು ಶಾಂತಿ ಪ್ರಕಾಶನ ಮಂಗಳೂರು ಇದರ ಮುಖ್ಯಸ್ಥರಾದ ಮುಹಮ್ಮದ್ ಕುಂಞಿಯವರು ರಂಝಾನ್ ಸಂದೇಶ ನೀಡಿದರು.
ಅವರು ಅಖಿಲ ಭಾರತ ಬ್ಯಾರಿ ಪರಿಷತ್    ಮತ್ತು ಅಹಿಂದ ಜನಚಳುವಳಿ, ದ.ಕ.ಮಂಗಳೂರು ಸಂಸ್ಥೆಗಳ ಸಹಭಾಗಿತ್ವದಲ್ಲಿ ಮಂಗಳೂರಿನಲ್ಲಿ ನಡೆದ “ರಂಝಾನ್ ಉಪವಾಸ ಮತ್ತು ಝಕಾತ್ ನ ಮಹತ್ವಗಳು” ಎಂಬ ವಿಚಾರವಿಮರ್ಶೆ ಹಾಗೂ‌ ಹೈಕೋರ್ಟ್ ನಿಯೋಜಿತ ಹಿರಿಯ ನ್ಯಾಯವಾದಿಯವರಿಗೆ ಅಭಿನಂದನಾ ಕಾರ್ಯಕ್ರಮದ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.
ಹೈಕೋರ್ಟ್ ಹಿರಿಯ ನ್ಯಾಯವಾದಿಯಾಗಿ ಇತ್ತೀಚೆಗೆ ನಿಯುಕ್ತಿಗೊಳಿಸಲ್ಪಟ್ಟ ತಾರನಾಥ್ ಪೂಜಾರಿ ಇರುವೈಲು ಇವರನ್ನು   ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು ಧರ್ಮಗಳು ಒಂದಕ್ಕೊಂದು ಪೂರಕ ಹೊರತು ಪರಸ್ಪರ ವಿರುದ್ಧ ಅಲ್ಲ.. ಜೀವನದ ಹಲವು ವಿಷಯಗಳ ಬಗ್ಗೆ ಎಲ್ಲಾ ಧರ್ಮಗಳು ಒಂದೇ ರೀತಿಯಾಗಿ ಸ್ಪಂದಿಸಿದರೆ,  ಕೆಲವು ತತ್ವಗಳ ಬಗ್ಗೆ ಮಾತ್ರ ವಿಭಿನ್ನ ದಾರಿ ತೋರಿಸಿವೆ.
ಇವುಗಳನ್ನು ಅರ್ಥೈಸಿಕೊಂಡು ನಾವು ಜೀವನ ಸಾಗಿಸಬೇಕಾಗಿದೆ ಎಂದರು. ಪದ್ಮನಾಭ ನರಿಂಗಾನ, ರೊನಾಲ್ಡ್ ಗೋಮ್ಸ್, ಬಿ.ಎ.ಮುಹಮ್ಮದ್ ಹನೀಫ್ ಮತ್ತಿತರರು ಈ ಸಂದರ್ಭದಲ್ಲಿ ಮಾತನಾಡಿದರು. ಯೂಸುಫ್ ವಕ್ತಾರ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಅಖಿಲ ಭಾರತ ಬ್ಯಾರಿ ಪರಿಷತ್ ಅಧ್ಯಕ್ಷ ರಾದ ಶಾಹುಲ್ ಹಮೀದ್ ಮೆಟ್ರೋ ರವರು  ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಭರತೇಶ್ ಬಜಾಲ್, ಇಸ್ಮಾಯಿಲ್ ಪೆರಿಂಜೆ, ಮುಹಮ್ಮದ್ ಇಂಜಿನಿಯರ್, ಹೈದರಾಲಿ,     ಅಕ್ರಮ್ ಹಸನ್ ಉಳ್ಳಾಲ್, ನಿಸಾರ್ ಫಕೀರ್ ಮುಹಮ್ಮದ್, ನ್ಯಾಯವಾದಿ ಮುಕ್ತಾರ್ ಅಹ್ಮದ್, ಇಬ್ರಾಹಿಂ ಕೋಣಾಜೆ, ಬಶೀರ್ ಮೊಂಟೆಪದವು, ಅಬ್ದುಲ್ ಖಾದರ್ ಇಡ್ಮಾ , ಹನೀಫ್ ಬಜಾಲ್, ಹಮೀದ್ ಕಿನ್ಯ ಮತ್ತಿತರ ಗಣ್ಯರು ಹಾಗೂ ಇತರ ಸಭಿಕರು ಉಪಸ್ಥಿತರಿದ್ದರು. ನಂತರ ಇಫ್ತಾರ್ ಕೂಟ ನಡೆಯಿತು.
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು