News Karnataka Kannada
Wednesday, May 01 2024
ಮಂಗಳೂರು

ದೈಪಿತ್ತಲು: ವನ್ಯಜೀವಿ ವಿಭಾಗದ ಸಿಬ್ಬಂದಿಗೆ ಎದುರಾದ ಕಾಡಾನೆಗಳು

Vijayapura: Wild Elephant attacks the farmer, causes serious injury
Photo Credit : IANS

ಬೆಳ್ತಂಗಡಿ : ಮಲವಂತಿಗೆ ಗ್ರಾಮದ ದಿಡುಪೆ ಸಮೀಪದ ನಂದಿಕಾಡು ಕರಿಯಂದೂರು ದೈಪಿತ್ತಿಲ್ ಮೊದಲಾದ ಪರಿಸರಗಳಲ್ಲಿರುವ ಕೃಷಿ ತೋಟಗಳಿಗೆ ದಾಳಿಯಿಡುವ ಕಾಡಾನೆಗಳು, ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಸಮೀಪದ ದೈಪಿತ್ತಲು ಬಳಿ ವನ್ಯಜೀವಿ ವಿಭಾಗದ ಸಿಬ್ಬಂದಿಗಳಿಗೆ ಎದುರಾದ ಘಟನೆ ನಡೆದಿದೆ.

ಬೆಳಗ್ಗೆ ಹತ್ತು ಗಂಟೆ ವೇಳೆಗೆ ದೈಪಿತ್ತಿಲು ಕಾಡಿನತ್ತ ಗಸ್ತು ತಿರುಗಾಟಕ್ಕೆ ಹೊರಟ ಸಿಬ್ಬಂದಿಗಳಿಗೆ ಒಂದು ಮರಿಯಾನೆ ಒಂದು ಗಂಡು ಹಾಗೂ ಒಂದು ಹೆಣ್ಣು ಆನೆಗಳು ರಸ್ತೆಗಿಂತ ಅನತಿ ದೂರದ ಕಾಡಿನಲ್ಲಿ ಕಂಡುಬಂದಿವೆ.  ಜಾಗೃತರಾದ ಸಿಬ್ಬಂದಿ ಸ್ಥಳೀಯರಿಗೆ ಮಾಹಿತಿ ನೀಡಿ ಅವರ ಸಹಕಾರದಲ್ಲಿ ಕಾಡಾನೆಗಳನ್ನು ಕಾಡಿನತ್ತ ಅಟ್ಟಿದ್ದಾರೆ.

ಕಳೆದ ವರ್ಷ ಕಡಿರುದ್ಯಾವರ ಗ್ರಾಮದ ತೋಟವೊಂದಕ್ಕೆ ಕಾಡಾನೆ ತಂಡ ದಾಳಿ ನಡೆಸಿದ ವೇಳೆ ಮರಿಯಾನೆ ತೋಟದಲ್ಲೆ ಉಳಿದು ದಾಂಧಲೆ ಎಬ್ಬಿಸಿದ ಬಳಿಕ,ಅರಣ್ಯ ಇಲಾಖೆ ಹರಸಾಹಸಪಟ್ಟು ಮರಿಯಾನೆಯನ್ನು ಕಾಡಿಗಟ್ಟಲು ಯಶಸ್ವಿಯಾಗಿತ್ತು. ಇದೀಗ ದಿಡುಪೆ ಸಮೀಪ ಅದೇ ಕಾಡಾನೆ ತಂಡ ಎದುರಾಗಿದೆ ಎಂದು ಹೇಳಲಾಗುತ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು