News Karnataka Kannada
Sunday, April 28 2024
ಮಂಗಳೂರು

ಯೆನೆಪೋಯ ವತಿಯಿಂದ ರಾಷ್ಟೀಯ ವಿಜ್ಞಾನ ದಿನ ಆಚರಣೆ

Yenopeya
Photo Credit : News Kannada

ಮಂಗಳೂರು: ಯೆನೆಪೋಯ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ), ದೇರಳಕಟ್ಟೆ, ಮಂಗಳೂರು ಇದರ ವತಿಯಿಂದ ರಾಷ್ಟೀಯ ವಿಜ್ಞಾನ ದಿನ 2022 ನ್ನು ಈ ವರ್ಷದ ರಾಷ್ಟೀಯ ವಿಷಯವಾದ ಸುಸ್ಥಿರ ಭವಿಷ್ಯಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಸಮಗ್ರ ಅನುಸಂಧಾನ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ರಾಷ್ಟೀಯ ವಿಜ್ಞಾನ ದಿನವನ್ನು ಪ್ರತೀ ವರ್ಷ ಫೆಭ್ರವರಿ 28ರಂದು ಸರ್ ಸಿ. ವಿ. ರಾಮನ್ ರವರ ರಾಮನ್ ಎಫೆಕ್ಟ್ ನ್ನು ಆವಿಷ್ಕರಿಸಿದ್ದರ ಗುರುತಿಗಾಗಿ ಆಚರಿಸಲಾಗುತ್ತದೆ.

ರಾಷ್ಟೀಯ ವಿಜ್ಞಾನ ದಿನದ ಅಂಗವಾಗಿ ಯುರೇಕಾ (ಪಿಚ್ ಆನ್ ಐಡಿಯಾ) ಮತ್ತು ಇನ್ ಸಿಗ್ನಿಯಾ (ಇ- ಲಾಂಛನ) ಸ್ಪರ್ಧೆಗಳನ್ನು ನಡೆಸಲಾಯಿತು. ಈ ಸ್ಪರ್ಧೆಗಳಲ್ಲಿ ಯೆನೆಪೋಯ ಹಾಗೂ ಮಂಗಳೂರಿನ ಶೈಕ್ಷಣಿಕ ಸಂಸ್ಥೆಯಿಂದ 40ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಂಶೋಧನೆಯನ್ನು ಪ್ರೋತ್ಸಾಹಿಸುವ ಸಲುವಾಗಿ, ಈ ದಿನದಂದು ಅತ್ತ್ಯುತ್ತಮ ಸಂಶೋಧನ ಪತ್ರಿಕೆ ಪ್ರಶಸ್ತಿಯನ್ನು ಡಾ ವಿನೀತಾ ಪೈ. ಯೆನೆಪೋಯ ವೈದ್ಯಕೀಯ ಮಹಾವಿದ್ಯಾಲಯ, ಡಾ ಶಶಿಕಾಂತಿ ಹೆಗ್ಡೆ., ಯೆನೆಪೋಯ ದಂತ ಮಹಾವಿದ್ಯಾಲಯ, ಡಾ ಯಶೋಧರ್ ಭಂಡಾರಿ. ಯೆನೆಪೋಯ ಸಂಶೋಧನಾ ಕೇಂದ್ರ, ಡಾ ಮುದಾಸಿರ್ ರಾಶಿದ್ ಬಾಬ., ಯೆನೆಪೋಯ ಭೌತಚಿಕಿತ್ಸೆ ಮಹಾವಿದ್ಯಾಲಯ, ಇವರಿಗೆ ನೀಡಲಾಯಿತು.ಹೆಚ್ಚು ಉಲ್ಲೇಖಿತ ಲೇಖನ ಪ್ರಶಸ್ತಿಯನ್ನು ಡಾ ರೇಖಾ ಪಿ. ಡಿ., ಯೆನೆಪೋಯ ಸಂಶೋಧನಾ ಕೇಂದ್ರ, ಡಾ ಅನಿಲ್ ಕಾಕ್ಕುಂಜೆ, ಯೆನೆಪೋಯ ವೈದ್ಯಕೀಯ ಮಹಾವಿದ್ಯಾಲಯ, ಡಾ ಅಖ್ತಾರ್ ಹುಸೈನ್, ಯೆನೆಪೋಯ ದಂತ ಮಹಾವಿದ್ಯಾಲಯ, ಇವರಿಗೆ ನೀಡಲಾಯಿತು.

ಅತ್ತ್ಯುತ್ತಮ ಸಂಶೋಧನ ಪ್ರಶಸ್ತಿಯನ್ನು ಡಾ ರಿಯಾಝ್ ಅಬ್ದುಲ್ಲಾ, ಯೆನೆಪೋಯ ದಂತ ಮಹಾವಿದ್ಯಾಲಯ, ಡಾ ಮಾಧವಿ ಭಾರ್ಗವ., ಯೆನೆಪೋಯ ವೈದ್ಯಕೀಯ ಮಹಾವಿದ್ಯಾಲಯ, ಡಾ ಮಹಮ್ಮದ್ ಗುಲ್ಜಾರ್ ಅಹಮದ್.ಯೆನೆಪೋಯ ಫಾರ್ಮಸಿ ಕಾಲೇಜು ಮತ್ತು ಸಂಶೋಧನಾ ಕೇಂದ್ರ, ಡಾ ರಾಜೇಶ್ ಪಿ. ಶಾಸ್ತ್ರಿ., ಯೆನೆಪೋಯ ಸಂಶೋಧನಾ ಕೇಂದ್ರ ನೀಡಲಾಯಿತು.

ಪ್ರೋತ್ಸಾಹಕರ ಬಹುಮಾನವನ್ನು ಡಾ ಮಹಮ್ಮದ್ ಗುಲ್ಜಾರ್ ಅಹಮದ್., ಯೆನೆಪೋಯ ಫಾರ್ಮಸಿ ಕಾಲೇಜು ಮತ್ತು ಸಂಶೋಧನಾ ಕೇಂದ್ರ ಹಾಗೂ ಡಾ ಲೀನಾ ಕೆ. ಸಿ., ಯೆನೆಪೋಯ ನರ್ಸಿಂಗ್ ಕಾಲೇಜು ಇವರಿಗೆ ನೀಡಲಾಯಿತು. ಯೆನೆಪೋಯ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ)ದ ಗೌರವಾನ್ವಿತ ಉಪಕುಲಪತಿಗಳಾದ ಡಾ ಎಮ್. ವಿಜಯ ಕುಮಾರ್ ರವರು ಸುಸ್ಥಿರ ಭವಿಷ್ಯಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಸಮಗ್ರ ಅನುಸಂಧಾನದ ಕುರಿತು
ಅಧ್ಯಕ್ಷೀಯ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಕುಲಸಚಿವರಾದ ಡಾ ಕೆ. ಎಸ್. ಗಂಗಾಧರ ಸೋಮಯಾಜಿ, ಶೈಕ್ಷಣಿಕ ಸಲಹೆಗಾರರಾದ ಡಾ ಅಬ್ದುಲ್ ರಹಿಮಾನ್, ಯೆನೆಪೋಯ ಸಂಶೋಧನಾ ಕೇಂದ್ರದ ನಿರ್ದೇಶಕಿ ಡಾ ರೇಖಾ ಪಿ. ಡಿ. ಯೆನೆಪೋಯ ಫಾರ್ಮಸಿ ಕಾಲೇಜು ಮತ್ತು ಸಂಶೋಧನಾ ಕೇಂದ್ರದ ಪ್ರಾಂಶುಪಾಲ ಡಾ ಮಹಮ್ಮದ್ ಗುಲ್ಜಾರ್ ಅಹಮದ್ ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು