ನವದೆಹಲಿ: ಇಂದು ಉಕ್ರೇನ್ ಯುದ್ಧ ಭೂಮಿಯಲ್ಲಿ ರಷ್ಯಾ ನಡೆಸಿದಂತ ಶೆಲ್ ದಾಳಿಗೆ ಖಾರ್ಕೀವ್ ನಗರದಲ್ಲಿ ಮೃತಪಟ್ಟಂತ ಕರ್ನಾಟಕದ ಹಾವೇರಿ ಮೂಲದ ನವೀನ್ ತಂದೆಗೆ ಪ್ರಧಾನಿ ನರೇಂದ್ರ ಮೋದಿ ಕರೆ ಮಾಡಿ, ಸಾಂತ್ವಾನ ಹೇಳಿದ್ದಾರೆ.
ಇಂದು ಉಕ್ರೇನ್ ಯುದ್ಧ ಭೂಮಿಯಲ್ಲಿ ಮೃತಪಟ್ಟಂತ ನವೀನ್ ತಂದೆಗೆ ಕರೆ ಮಾಡಿದಂತ ಪ್ರಧಾನಿ ನರೇಂದ್ರ ಮೋದಿಯವರು, ದೇಶವೇ ನಿಮ್ಮೊಂದಿಗಿದೆ, ಮಗನ ಸಾವನ್ನು ಅರಗಿಸಿಕೊಳ್ಳುವಂತ ಶಕ್ತಿಯನ್ನು ಆ ದೇವರು ನೀಡಲಿ. ಭಗವಂತ ನಿಮ್ಮ ಕುಟುಂಬಕ್ಕೆ ಮಗನ ಸಾವಿನ ದುಖ ಭರಿಸುವ ಶಕ್ತಿ ನೀಡಲಿ ಎಂಬುದಾಗಿ ಸಾಂತ್ವಾನ ಹೇಳಿದ್ದಾರೆ.
ಉಕ್ರೇನ್ ನ ಖಾರ್ಕೀವ್ ನಲ್ಲಿನ ಸೂಪರ್ ಮಾರ್ಕೆಟ್ ಬಳಿಯಲ್ಲಿ ಬೆಳಿಗ್ಗೆ ತಿಂಡಿ ತರೋದಕ್ಕೆ ತೆರಳಿದ್ದಂತ ಕರ್ನಾಟಕದ ಹಾವೇರಿಯ ನವೀನ್, ರಷ್ಯಾ ಸೇನೆಯಿಂದ ನಡೆಸಿದಂತ ಶೆಲ್ ದಾಳಿಯಿಂದಾಗಿ ಸಾವನ್ನಪ್ಪಿದ್ದರು.
ಈ ಮೂಲಕ ಉಕ್ರೇನ್ ನಲ್ಲಿ ಯುದ್ಧ ಭೂಮಿಯಲ್ಲಿ ಭಾರತೀಯ ವೈದ್ಯಕೀಯ ವಿದ್ಯಾರ್ಥಿಯೊಬ್ಬನ ಮೊದಲ ಬಲಿಯಾಗಿತ್ತು.