ಬೆಳ್ತಂಗಡಿ: ಯಕ್ಷಭಾರತಿ (ರಿ) ಕನ್ಯಾಡಿ ಇದರ ಶಿಕ್ಷಣ ಸೇವಾ ಯೋಜನೆಯ ಅಂಗವಾಗಿ ಮೂರರಿಂದ ಎಂಟನೇ ತರಗತಿವರೆಗಿನ ವಿದ್ಯಾರ್ಥಿಗಳಿಗಾಗಿ “ಸಂಸ್ಕಾರ ಶಿಕ್ಷಣ ಶಿಬಿರ’ ವನ್ನು ಎ 29 ರಂದು ಉಜಿರೆಯ ಶ್ರೀ ಶಾರದಾ ಮಂಟಪದಲ್ಲಿ ಆಯೋಜಿಸಲಾಗಿತ್ತು.
ಶಿಬಿರವನ್ನು ಉಜಿರೆಯ ಉದ್ಯಮಿ ಮೋಹನ ಶೆಟ್ಟಿಗಾರ್ ಉದ್ಘಾಟಿಸಿ ಮಕ್ಕಳು ಎಳವೆಯಲ್ಲೇ ಶಿಕ್ಷಣದ ಜತೆಗೆ ಸಂಸ್ಕಾರವನ್ನು ಮೈಗೂಡಿಸಿಕೊಂಡು ಆದರ್ಶ ವ್ಯಕ್ತಿತ್ವದಿಂದ ಸತ್ಪ್ರಜೆಯಾಗಿ ಬದುಕು ರೂಪಿಸಿಕೊಳ್ಳಬೇಕೆಂದು ನುಡಿದರು.
ಯಕ್ಷಭಾರತಿ ಅಧ್ಯಕ್ಷ ರಾಘವೇಂದ್ರ ಬೈಪಾಡಿತ್ತಾಯ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಸಂಚಾಲಕ ಮಹೇಶ್ ಕನ್ಯಾಡಿ , ಕುಸುಮಾಕರ ಉಪಸ್ಥಿತರಿದ್ದರು.
ಭವ್ಯಶ್ರೀ ಹೊಳ್ಳ ಕಾರ್ಯಕ್ರಮ ನಿರೂಪಿಸಿದರು . ಉಜಿರೆ ಪರಿಸರದ 50 ವಿದ್ಯಾರ್ಥಿಗಳು ಸಂಸ್ಕಾರ ಶಿಬಿರದಲ್ಲಿ ಭಾಗವಹಿಸಿದ್ದು ಸಂಪನ್ಮೂಲ ವ್ಯಕ್ತಿಗಳಾಗಿ ಬೆಳಾಲು ಶ್ರೀ ಧ ಮಂ ,ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ರಾಮಕೃಷ್ಣ ಭಟ್ ಚೊಕ್ಕಾಡಿ ಅವರು “ಭಾರತೀಯತೆ ಮತ್ತು ಹಬ್ಬಗಳು’ ಎಂಬ ಕುರಿತು ,ಉಜಿರೆ ಶ್ರೀ ಧ .ಮಂ .ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕಾಲೇಜಿನ ಯೋಗ ಉಪನ್ಯಾಸಕ ಡಾ! ಉದಯ ಸುಬ್ರಹ್ಮಣ್ಯ ಅವರಿಂದ “ಯೋಗ ಮತ್ತು ಅರೋಗ್ಯ” ಕುರಿತು ಯೋಗ ಪ್ರಾತ್ಯಕ್ಷಿಕೆ ,ಪುತ್ತೂರು ಜಿಲ್ಲಾ ಆರ್ ಎಸ್ .ಎಸ್ .ಉದ್ಯೋಗ ಪ್ರಮುಖ್ ಸುದರ್ಶನ ಕನ್ಯಾಡಿಯವರು “ದೇಶೀಯ ಆಟಗಳು ಮತ್ತು ರಾಷ್ಟ್ರೀಯತೆ ” ಎಂಬ ಕುರಿತು ಹಾಗೂ ನೆರಿಯ ಜಯಕೇಸರಿ ಯುವಜನ ಸಂಘದ ಸಂಚಾಲಕ ಹರೀಶ್ ನೆರಿಯ ಅವರು “ಭಜನೆ ಮತ್ತು ಭಕ್ತಿ ” ಎಂಬ ಕುರಿತು ಉಪನ್ಯಾಸ ಹಾಗು ಪ್ರಾತ್ಯಕ್ಷಿಕೆಗಳನ್ನು ನಡೆಸಿಕೊಟ್ಟರು. ಸಂಜೆ ನಡೆದ ಶಿಬಿರದ ಸಮಾರೋಪ ಸಮಾರಂಭದಲ್ಲಿ ಸುದರ್ಶನ ಕನ್ಯಾಡಿ ಮತ್ತು ಹರೀಶ್ ನೆರಿಯ ಭಾಗವಹಿಸಿದ್ದರು.
ಯಕ್ಷಭಾರತಿ ಅಧ್ಯಕ್ಷ ರಾಘವೇಂದ್ರ ಬೈಪಾಡಿತ್ತಾಯ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿದರು. ಭವ್ಯಶ್ರೀ ಹೊಳ್ಳ ಸ್ವಾಗತಿಸಿ,ಭಾರತಿ ಎಂ.ಎಲ್.ವಂದಿಸಿದರು. ಯಕ್ಷಭಾರತಿಯ ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ ಕಾರ್ಯಕ್ರಮ ನಿರೂಪಿಸಿ ,ಸಂಚಾಲಕ ಮಹೇಶ್ ಕನ್ಯಾಡಿ ,ಹರೀಶ್ ಕೊಳ್ತಿಗೆ, ಶಿತಿಕಂಠ ಭಟ್ ಸಹಕರಿಸಿದ್ದರು.