ಅಜೆಕಾರು: ಸಾಹಿತ್ಯ ಸಮ್ಮೇಳನಗಳಲ್ಲಿ ಯಕ್ಷಗಾನ ಸಾಹಿತ್ಯಕ್ಕೆ ಮತ್ತು ಕವಿತೆಗೆ ಹೆಚ್ಚಿನ ಪ್ರಾಶಸ್ತ್ಯ ಬೇಕು. ಡಾ. ಶೇಖರ ಅಜೆಕಾರು ಅವರ ನೇತೃತ್ವದ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ ಯಕ್ಷಗಾನ ಕಲಾವಿದರಿಗೆ, ಕವಿತೆಗಳಿಗೆ ಪ್ರಾಶಸ್ತ್ಯ ನೀಡಿದೆ. ೨೦೨೧ ರ ಸಮ್ಮೇಳನದಲ್ಲಿ ಯಕ್ಷಗಾನ ಪ್ರಸಂಗಕರ್ತನಾದ ನನಗೆ ರಾಜ್ಯಮಟ್ಟದ ಕವಿಗೋಷ್ಠಿಯ ಅಧ್ಯಕ್ಷತೆಯ ಗೌರವ ನೀಡಿ ಧನ್ಯತೆಯನ್ನು ತಂದಿದೆ ಎಂದು ಖ್ಯಾತ ಯಕ್ಷಗಾನ ಪ್ರಸಂಗಕರ್ತ ದೇವದಾಸ ಈಶ್ವರಮಂಗಲ ಅಭಿಪ್ರಾಯಪಟ್ಟರು.
ಅವರು ಅಜೆಕಾರು ಕುರ್ಪಾಡಿಯ ಆದಿಗ್ರಾಮೋತ್ಸವ ಕಾನನ ಮಂಟಪದಲ್ಲಿ ಭಾನುವಾರ ನಡೆದ ನನ್ನ ಕವಿತೆ- ನನ್ನ ಕಥೆ ಕಾರ್ಯಕ್ರಮದ ಗೋಷ್ಠಿಯನ್ನು ಉದ್ಘಾಟಿಸಿ ತಮ್ಮ ಪ್ರಸಂಗದ ಕವಿತೆಗಳನ್ನು ಉಲ್ಲೇಖಿಸಿ ಮಾತನಾಡುತ್ತಿದ್ದರು.
ಕಾರ್ಯಕ್ರಮವನ್ನು ತೋರಣ ಏರಿಸುವ ಮೂಲಕ ಖ್ಯಾತ ಡಿಸೇಲ್ ಮೆಕಾನಿಕ್ ಸಾಣೂರು ಅರುಣ್ ಶೆಟ್ಟಿಗಾರ್ ಅಜೆಕಾರು ಅವರು ಉದ್ಘಾಟಿಸಿದರು. ಸಂಘಟಕ ಡಾ.ಶೇಖರ ಅಜೆಕಾರು ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ನಿಜವಾದ ಕೇಳುಗರಿದ್ದರೆ ಅದು ದೊಡ್ಡ ಕಾರ್ಯಕ್ರಮ, ಸಾಹಿತ್ಯದ ಅಭಿರುಚಿ ಇಲ್ಲದವರ ಎದುರು ಮಾತನಾಡುವುದು ನಿಷ್ಪ್ರಯೋಜಕ ಎಂದರು.
ಮರ್ಣೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಜ್ಯೋತಿ, ಸದಸ್ಯ ಅಬ್ದುಲ್ ಗಫೂರ್, ಡಾ.ವಾಣಿ, ಅಜೆಕಾರು ಬಾಲಕೃಷ್ಣ ಹೆಗ್ಡೆ, ಮಕ್ಕಳ ವಿಭಾಗದ ಸುನಿಧಿ ಎಸ್. ಅಜೆಕಾರು , ಸುನಿಜ ಅಜೆಕಾರು ಸಮಿತಿಯ ಪ್ರಧಾನ ಕಾರ್ಯದರ್ಶಿ ಸೌಮ್ಯಶ್ರೀ ಎಸ್.ಎ, ಆದಿಗ್ರಾಮೋತ್ಸವ ಸೇವಾಕರ್ತೆ ಗಿರಿಜಾ ಶಂಕರ್ ಮೊದಲಾದವರು ಉಪಸ್ಥಿತರಿದ್ದರು.
ಶಿಕ್ಷಕಿ ಶರಣ್ಯ ಬೆಳ್ವಾಯಿ ಕಾರ್ಯಕ್ರಮ ನಿರ್ವಹಿಸಿದರು.ಉಪನ್ಯಾಸಕ ದೀಪಕ್ ಎನ್ ದುರ್ಗಾ ಸ್ವಾಗತಿಸಿದರು. ಸ್ವಚ್ಚ ಭಾರತ್ ಅಭಿಯಾನದ ಕಾರ್ಯಕರ್ತೆ ಸುನೀತಾ ಅಂಡಾರು ವಂದಿಸಿದರು.
ಕವಿಗಳು: ತಮ್ಮ ಬರವಣಿಗೆಯ ಕುರಿತು ಮಾತನಾಡಿ ಕವಿತೆ ವಾಚಿಸುವ ವಿನೂತನ ಕಾರ್ಯಕ್ರಮದಲ್ಲಿ ಹತ್ತು ಮಂದಿ ಭಾಗವಹಿಸಿದರು. ವನಜಾ ಎಚ್.ಎನ್ ಎಣ್ಣೆಹೊಳೆ, ಭರತ್ ಕೆ.ಆರ್. ಕಾರೆಕೆರೆ ಹಾಸನ, ಬಾಲಕೃಷ್ಣ ಹೆಗ್ಡೆ ಅಜೆಕಾರು, ದೀಪಕ್ ಎನ್.ದುರ್ಗಾ ಕಾರ್ಕಳ, ಅಶ್ವಿನಿ ಕುಲಾಲ್ ಕಡ್ತಲ, ಗುರುರಾಜ್ ಎಂ. ಆರ್, ಡಾ.ವಾಣಿಶ್ರೀ, ಮಂಜುನಾಥ ಕೆ.ಶಿವಪುರ, ಸುಧೀರ್ ಕುಕ್ಕುಂದೂರು, ಶರಣ್ಯ ಬೆಳುವಾಯಿ ಭಾಗವಹಿಸಿದರು. ಉದಯ ಪಿ ಅಜೆಕಾರು ಅವರು ಕನ್ನಡ ಗೀತಗಾಯನ ನಡೆಸಿಕೊಟ್ಟರು.