ಬೆಳ್ತಂಗಡಿ : ಗ್ರಾಮ ಪಂಚಾಯತ್ ವೇಣೂರು ವತಿಯಿಂದ ಉದ್ಯಮಿ ರಾಬರ್ಟ್ ಡಿಸೋಜ ಅವರ ಪ್ರಾಯೋಜಕತ್ವದಲ್ಲಿ ನಿರ್ಮಾಣವಾದ ಈಶ್ವರ ಮಾಸ್ಟರ್ ರಸ್ತೆ ನಾಮಫಲಕವನ್ನು ಮಾನವ ಹಕ್ಕು ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ರಾಬರ್ಟ್ ಡಿಸೋಜಾ ಅನಾವರಣ ಗೊಳಿಸಿದರು.
ಅಧ್ಯಕ್ಷತೆಯನ್ನು ವೇಣೂರು ಗ್ರಾ ಪಂ ಅಧ್ಯಕ್ಷ ನೇಮಯ್ಯ ಕುಲಾಲ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವೇಣೂರು ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸುಂದರ ಹೆಗ್ಡೆ, ವಕೀಲರಾದ ನಾಗೇಶ್ ಶೆಟ್ಟಿ, ಸತೀಶ್ ಪಿ.ಎನ್, ಗ್ರಾ.ಪಂ. ಉಪಾಧ್ಯಕ್ಷೆ ಪುಷ್ಪಾ, ಸದಸ್ಯರುಗಳಾದ ಅರುಣ್ ಕ್ರಾಸ್ತಾ, ಹರೀಶ್ ಪಿ.ಎಸ್, ಉಮೇಶ್ ನಡ್ತಿಕಲ್ಲು, ದಿನೇಶ್ ತಾರಿಪಡ್ಪು, ಸುರೇಶ್ ಪೂಜಾರಿ, ಮಾಜಿ ಪಂ ಅಧ್ಯಕ್ಷ ಮೋಹನ ಅಂಡಿಂಜೆ, ಮಾಜಿ ಸದಸ್ಯೆ ಜೆಸ್ಸಿಟೀಚರ್, ಜಾನಕಿ ಟೀಚರ್, ಸೋನಿಯಾ ರಾಬರ್ಟ್,ಶಿಕ್ಷಕಿ ಕ್ರಿಸ್ತಿನಾ ಜೊನಿಫರ್, ವೇಣೂರು ಬಿಲ್ಲವ ಸಂಘದ ಅಧ್ಯಕ್ಷ ಹರೀಶ್ ಕುಮಾರ್, ಯುವವಾಹಿನಿ ಘಟಕದ ಅಧ್ಯಕ್ಷ ಯೋಗಿಶ್ ಬಿಕ್ರೋಟ್ಟು, ಮಾಜಿ ಅಧ್ಯಕ್ಷ ಅರುಣ್ ಕೋಟ್ಯಾನ್ ತಾಲೂಕು ನಿರ್ದೇಶಕರಾದ ರಮೇಶ್ ಪಡ್ದಾಯಿಮಜಲು, ರಕ್ಷೀತ್ ಬಂಗೇರ ಹಲೆಕ್ಕಿ, ಮೂಡುಕೋಡಿ ಬಿಲ್ಲವ ಸಂಘದ ಅಧ್ಯಕ್ಷ ರವೀಂದ್ರ ಪಾಲ್ದಲ್ಕೆ, ಸುಂದರ ಅಪರ್ಣ, ಸುದೀಪ್ ಉಂಬೆಟ್ಟು, ಸುಂದರ ಪೂಜಾರಿ ಪುತ್ತಿಲಕಜೆ, ಶೇಖರ ಕೊಳಂಗಜೆ ಉಪನ್ಯಾಸಕ ಆನಂದಪ್ಪ, ತೇಜಸ್ ಉಪಸ್ಥಿತರಿದ್ದರು.
ರತ್ನರಾಜ ಆರಿಗ ಪ್ರಸ್ತಾವಿಸಿ, ಪಂ.ಸದಸ್ಯ ಅನುಪ್ ಜೆ.ಪಾಯಸ್ ಸ್ವಾಗತಿಸಿ ನಿರೂಪಿಸಿ, ಧರ್ಮರಾಜ್ ವಂದಿಸಿದರು.