ಕೊಪ್ಪಳ ; ಪ್ರೀತಿಸಿ ಮದುವೆಯಾದ ಹೆಂಡತಿಯನ್ನು ಗಂಡನೇ ಕೊಲೆ ಮಾಡಿದ ನಂತರ ಏನು ಆಗಿಲ್ಲ ಎಂಬಂತೆ ಸುಮ್ಮನಿದ್ದ ಆರೋಪಿಯೊಬ್ಬನನ್ನು 27 ತಿಂಗಳ ನಂತರ ಪೋಲೀಸರು ಬಂಧಿಸಿದ್ದಾರೆ.
ಕುಷ್ಟಗಿ ರವಿಕುಮಾರ ಹಿರೇಮನಿ ಬಂಧಿತ ಆರೋಪಿ. ಈತ ಫಾರ್ಮಸಿಯನ್ನು ಓದಿದ್ದು ವಿಜಯಪುರ ಜಿಲ್ಲೆಯಲ್ಲಿ ಬಾಲಾಜಿ ವಿಂಡ್ ಪಾವರ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ರವಿಕುಮಾರ ಮಂಜವ್ವ (32 ) ಎಂಬುವವರನ್ನು ಹುಬ್ಬಳ್ಳಿಯಲ್ಲಿ ಓದುತ್ತಿರುವಾಗ ಪರಿಚಯ ಮಾಡಿಕೊಂಡಿದ್ದ. ಬಿಎ, ಬಿಎಡ್ ಓದಿರುವ ಮಂಜವ್ವ ಕುಷ್ಟಗಿ ತಾಲೂಕಿನ ನೆರಬೆಂಚಿ ಗ್ರಾಮದವರು.
ಹುಬ್ಬಳ್ಳಿಯಲ್ಲಿ ಓದುತ್ತಿರುವಾಗ ಕುಷ್ಟಗಿಯ ಫಾರ್ಮಿಸಿ ಕಲಿತಿರುವ ರವಿಕುಮಾರನ ಪರಿಚಯವಾಗಿದೆ. ಪರಿಚಯ, ಸ್ನೇಹ ನಂತರ ದೈಹಿಕ ಸಂಪರ್ಕವಾಗಿದೆ. ದೈಹಿಕ ಆಸೆ ತೀರಿಸಿಕೊಂಡ ನಂತರ ರವಿಕುಮಾರ ಮಂಜವ್ವಳಿಂದ ದೂರವಾಗಲು ಯತ್ನಿಸಿದ್ದ. ಆದರೆ ಮಂಜವ್ವ ಮದುವೆ ಮಾಡಿಕೊಳ್ಳದಿದ್ದರೆ ಪೊಲೀಸರಿಗೆ ದೂರು ನೀಡುವುದಾಗಿ ಒತ್ತಡ ಹಾಕಿದ್ದಾಳೆ. ಈ ಒತ್ತಡಕ್ಕೆ ಮಣಿದ ರವಿಕುಮಾರ 2018 ಡಿಸೆಂಬರ್ 4 ರಂದು ಕುಷ್ಟಗಿ ಉಪನೊಂದಣಿ ಕಚೇರಿಯಲ್ಲಿ ವಿವಾಹ ನೊಂದಣಿ ಮಾಡಿಕೊಂಡಿದ್ದ. ನಂತರ ಆಕೆ ನಾಪತ್ತೆ ಆಗಿದ್ದಾಳೆ ಎಂದು ಕಥೆ ಕಟ್ಟಿದ್ದ. ಮಂಜವ್ವಳ ಮನೆಯವರು ಪೋಲೀಸರಿಗೆ ದೂರು ನೀಡಿದ ನಂತರ ಪ್ರಕರಣ ಬಯಲಾಗಿದೆ.
ಪ್ರೀತಿಸಿ ಮದುವೆಯಾದ ಪತ್ನಿಯ ಕೊಲೆ ಮಾಡಿದ 27 ತಿಂಗಳ ನಂತರ ಬಂಧನ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.