ಮಂಗಳೂರು :ಮಳಲಿ ಮಸೀದಿ ನವೀಕರಣ ವೇಳೆ ದೇವಸ್ಥಾನದ ಕುರುಹು ಪತ್ತೆ ಅಹಿತಕರ ಘಟನೆ ನಡೆಯದಂತೆ ಹೆಚ್ಚುವರಿ ಪೊಲೀಸ್ ಭದ್ರತೆ ಕಮಿಷನರ್ ಶಶಿಕುಮಾರ್ ಮಾಧ್ಯಮಕ್ಕೆ ಮಾಹಿತಿ ನೀಡಿದರು.
ಮಳಲಿಯಲ್ಲಿ ಮಸೀದಿ ನವೀಕರಣ ವೇಳೆ ಪ್ರಾಚೀನ ದೇವಸ್ಥಾನದ ಕುರುಹು ಪತ್ತೆಯಾಗಿದೆ ಎಂಬ ಆರೋಪ ವ್ಯಕ್ತವಾಗಿದ್ದು ಈ ನೆಲೆ ಅಹಿತಕರ ಘಟನೆ ನಡೆಯದಂತೆ ಹೆಚ್ಚುವರಿ ಪೊಲೀಸ್ ಭದ್ರತೆ ಹಾಕಲಾಗಿದೆ ಎಂದು ಶಶಿಕುಮಾರ್ ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಅವರು ಮಸೀದಿ ನವೀಕರಣ ವೇಳೆ ಮರದ ಕೆತ್ತನೆ ಮಾದರಿ ಪತ್ತೆಯಾಗಿದೆ ಈ ವಿನ್ಯಾಸದ ದೇವಸ್ಥಾನದ ರೀತಿ ಇದೆ ಅಂತ ಕೆಲವರು ಇದನ್ನು ಕೆಡವಬಾರದು ಎಂದಿದ್ದಾರೆ , ಹೀಗಾಗಿ ತಹಸೀಲ್ದಾರ್ ನಾನು ಮತ್ತು ನಮ್ಮ ಸ್ಥಳೀಯ ಅಧಿಕಾರಿಗಳು ಆ ಜಾಗಕ್ಕೆ ಭೇಟಿ ಕೊಟ್ಟಿದ್ದೇವೆ ಅಲ್ಲಿನ ಸ್ಥಳೀಯರು ಮಸೀದಿ ಕಮಿಟಿ ಹಾಗೂ ಸಾರ್ವಜನಿಕರ ಜೊತೆ ಮಾತನಾಡಿದ್ದೇವೆ ದಾಖಲೆಗಳ ಮೂಲಕ ಪರಿಶೀಲಿಸಿ ಸಮಸ್ಯೆ ಇತ್ಯರ್ಥ ಮಾಡಲು ಮಸೀದಿ ಸಮಿತಿಯವರು ಒಪ್ಪಿದ್ದಾರೆ ಎಂದರು.
ಇನ್ನು ಇದೊಂದು ಧಾರ್ಮಿಕ ವಿಚಾರವಾಗಿದ್ದರಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಹೆಚ್ಚುವರಿ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ.
ಇಲ್ಲಿನ ಹಿಂದೂ ಮುಸ್ಲಿಮರು ಬಹಳ ವರ್ಷಗಳಿಂದ ಅನ್ಯೋನ್ಯವಾಗಿದ್ದಾರೆ ಎರಡೂ ವರ್ಗದವರು ಸತ್ಯಾಸತ್ಯತೆ ಪರಿಶೀಲನೆ ಒಪ್ಪಿದ್ದಾರೆ ಜಿಲ್ಲಾಡಳಿತ ತೆಗೆದುಕೊಳ್ಳುವ ನಿರ್ಧಾರ ಬದ್ಧ ಎಂಬುದಾಗಿ ಹೇಳಿದ್ದಾರೆ ತಹಸೀಲ್ದಾರ್ ಸೂಚನೆಯಂತೆ ಮಸೀದಿ ಕಮಿಟಿ 1ವಾರಗಳ ಕಾಲ ಕಾಮಗಾರಿ ಸ್ಥಗಿತ ಮಾಡಿದೆ ಎಂದು ತಿಳಿಸಿದ್ದಾರೆ.