ಬೆಳ್ತಂಗಡಿ : ಪೆರಾಡಿ ಸೇವಾ ಸಹಕಾರಿ ಸಂಘದ ಮಾಜಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಹಾಗೂ ಪ್ರಸ್ತುತ ನಿರ್ದೇಶಕ ಜಯ ಕುಮಾರ್(72) ಅವರು ಹೃದಯಸ್ಥಂಬನದಿಂದ ನಿಧನರಾದರು.
ಮರೋಡಿ ನಿವಾಸಿಯಾಗಿರುವ ಅವರು ಸೋಮವಾರ ಗುರುವಾಯನಕೆರೆ ಸಭಾಂಗಣವೊಂದರಲ್ಲಿ ಮದುವೆ ಸಮಾರಂಭದಲ್ಲಿ ಭಾಗವಹಿಸಿ ಊಟ ಮುಗಿಸಿದ್ದ ಅವರು ಬಳಿಕ ಕುಸಿದುಬಿದ್ದು ತೀವ್ರ ಅಸ್ವಸ್ಥಗೊಂಡರು. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅದಾಗಲೇ ಅವರು ಮೃತರಾಗಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಮೃತರು ಮೂವರು ಪುತ್ರರು ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.