News Karnataka Kannada
Monday, April 29 2024
ಮಂಗಳೂರು

ಫೈ ಓವರ್ ನಿರ್ಮಾಣ ಕಾರ್ಯಕ್ಕೆ ಮುಗಿದ ಭೂಸ್ವಾಧೀನ ಪ್ರಕ್ರಿಯೆ ಭೂ ಸ್ವಾಧೀನಕ್ಕೆ ಗುರುತಿಸಲಾದ ಬಹುತೇಕ ಕಟ್ಟಡಗಳು ನೆಲಸಮ

New Project 2021 10 17t091455.635
Photo Credit :

ಬಂಟ್ವಾಳ: ಬಿ.ಸಿ.ರೋಡು- ಅಡ್ಡಹೊಳೆ ಹೆದ್ದಾರಿ ಅಭಿವೃದ್ಧಿ ನಿಟ್ಟಿನಲ್ಲಿ ಕಲ್ಲಡ್ಕದಲ್ಲಿ ಫೈ ಓವರ್ ನಿರ್ಮಾಣಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆ ಮುಗಿದು, ಕಟ್ಟಡಗಳ ತೆರವು ಕಾರ್ಯಕ್ಕೆ ವೇಗ ದೊರಕಿದೆ.ರಾಷ್ಟ್ರೀಯ ಹೆದ್ದಾರಿಯು ಭೂ ಸ್ವಾಧೀನಕ್ಕೆ ಗುರುತಿಸಲಾದ ಬಹುತೇಕ ಕಟ್ಟಡಗಳು ನೆಲಸಮಗೊಂಡಿದೆ.

ಬಿ.ಸಿ.ರೋಡು- ಅಡ್ಡಹೊಳೆ ಮಧ್ಯದ ೬೪ ಕಿ.ಮೀ. ಚತುಷ್ಪಥ ಹೆದ್ದಾರಿಯ ಕಾಮಗಾರಿ 2 ಹಂತಗಳಲ್ಲಿ ನಡೆಯಲಿದ್ದು, ಈಗಾಗಲೇ ಕಾಮಗಾರಿ ಆರಂಭಕ್ಕೆ ಮುನ್ನ ನಡೆಯಬೇಕಾದ ಪೂರ್ವಭಾವಿ ಪ್ರಕ್ರಿಯೆಗಳು ಆರಂಭಗೊಂಡಿದೆ. ಕಲ್ಲಡ್ಕದಿಂದ ಮೆಲ್ಕಾರ್ ವರೆಗೂ ಈ ಪ್ರಕ್ರಿಯೆಗಳು ನಡೆಯುತ್ತಿದೆ. ಅಡ್ಡಹೊಳೆಯಿಂದ ಪೆರಿಯಶಾಂತಿ ಹಾಗೂ ಪೆರಿಯಶಾಂತಿಯಿಂದ ಬಿ.ಸಿ.ರೋಡುವರೆಗೆ ಎರಡು ಹಂತದ ಕಾಮಗಾರಿ ನಡೆಯಲಿದ್ದು, ಕಲ್ಲಡ್ಕದಲ್ಲಿ ಫೈ ಓವರ್ ನಿರ್ಮಾಣವಾಗಲಿದೆ.ಕಲ್ಲಡ್ಕ ಪೇಟೆಯ ಹೆಚ್ಚಿನ ಕಟ್ಟಡಗಳು ಹೆದ್ದಾರಿಗಾಗಿ ತೆರವುಗೊಳ್ಳಲಿದ್ದು, ಅವುಗಳನ್ನು ಸ್ಥಳಾಂತರಗೊಳಿಸುವ ಕಾಮಗಾರಿಯೂ ನಡೆಯುತ್ತಿದೆ. ಕೆಲವು ಹಳೆಯ ಕಟ್ಟಡಗಳ ಹಿಂಭಾಗದಲ್ಲಿ ಹೊಸ ಕಟ್ಟಡಗಳು ನಿರ್ಮಾಣಗೊಳ್ಳುತ್ತಿದ್ದರೆ, ಮತ್ತೆ ಕೆಲವು ಪೇಟೆಯಿಂದ ಹೊರಭಾಗದಲ್ಲಿ ನಿರ್ಮಾಣವಾಗುತ್ತಿದೆ.ಕಲ್ಲಡ್ಕವನ್ನು ಗುರುತಿಸಿದ್ದ ಹಲವು ಕಟ್ಟಡಗಳು ಮಾಯ

ಕಲ್ಲಡ್ಕದ ಹಳೆಯ ಕೆಟಿ ಹೋಟೆಲ್, ಶಿಲ್ಪಾ ಗೊಂಬೆ ಬಳಗದ ಕಚೇರಿ, ಮನೆ, ಧಾರ್ಮಿಕ ಇತಿಹಾಸವಿದ್ದ ಮಹಮ್ಮಾಯಿ ಕಟ್ಟೆ, ಬಟ್ಟೆ ವ್ಯಾಪಾರ ದಲ್ಲಿ ಛಾಪನ್ನು ಮೂಡಿಸಿದ್ದ ಸೋಜಾ ಜವುಳಿ ಮಳಿಗೆ, ಸೋಜಾ ಮೆಟಲ್ ಸ್ಟೋರ್, ಹಳೆಯ ಬಸ್ ನಿಲ್ದಾಣ, ಮಾಜಿ ಶಾಸಕರ ಕಟ್ಟಡದ ಲ್ಲಿದ್ದ ವಿಜಯ ಬ್ಯಾಕ್, ಗೋಪಾಲ ಜವಳಿ ಅಂಗಡಿ, ಕಲ್ಲಡ್ಕ ರೈಸ್ ಮಿಲ್, ಶಿಲ್ಪಾ ವಾಚ್ ಅಂಗಡಿ ಹೀಗೆ ಹಲವಾರು ಅಂಗಡಿಗಳು ಧರಶಾಹಿಯಾಗಿವೆ.
ಕೆಲವೊಂದು ಅಂಗಡಿಗಳು ಇತಿಹಾಸದ ಪುಟಗಳಲ್ಲಿ ಅಚ್ಚಾದರೆ ಹೆಚ್ಚಿನ ಅಂಗಡಿಗಳು ಅಲ್ಲೇ ಹಿಂಬದಿಯಲ್ಲಿ ತಲೆ ಎತ್ತಿ ನಿಲ್ಲಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
153
Mounesh V

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು