ಮಂಗಳೂರು: ಯೆನೆಪೋಯ ನರ್ಸಿಂಗ್ ಕಾಲೇಜಿನ ಎನ್ ಎಸ್ ಎಸ್ ಘಟಕ, ಸಮುದಾಯ ಆರೋಗ್ಯ ಶುಶ್ರುಷ ವಿಭಾಗ ಹಾಗೂ ಮಾದಕ ವ್ಯಸನ ತಡೆಗಟ್ಟುವ ಕೇಂದ್ರ-ಸ್ಯಾಟಲೈಟ್ ಘಟಕ ಇವರು ದಕ್ಷಿಣ ಕನ್ನಡ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಹಯೋಗದೊಂದಿಗೆ ವಿಶ್ವ ತಂಬಾಕು ರಹಿತ ದಿನಾಚರಣೆಯನ್ನು ಜೂನ್ ೧ ೨೦೨೨ ರಂದು ಕ.ರಾ.ರ. ಸಾ.ನಿ ಬಸ್ ನಿಲ್ದಾಣ ಬಿಜೈ ಮಂಗಳೂರು ಇಲ್ಲಿ ಆಯೋಜಿಸಿದರು.
ಕಾರ್ಯಕ್ರಮದ ಅಂಗವಾಗಿ ಲಾಲ್ ಬಾಗ್ ವೃತ್ತದಿಂದ ಬಿಜೈ ಬಸ್ ನಿಲ್ದಾಣದವರೆಗೆ ಜಾಗೃತಿ ಜಾಥಾವನ್ನುತಂಬಾಕು ವ್ಯಸನ ವಿರೋಧಿ ಘೋಷಣೆಯೊಂದಿಗೆ ನಡೆಸಲಾಯಿತು.
ನಂತರ ನಡೆದ ಸಭಾಕಾರ್ಯಕ್ರಮವನ್ನು ಗಣ್ಯರು ಕೃತಕ ಸಿಗರೇಟ್ ಮಾದರಿಯನ್ನು ತುಂಡರಿಸುವ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿ ಶ್ರೀಮತಿ ಜ್ಯೋತಿ, ಜಿಲ್ಲಾ ಆರೋಗ್ಯ ಶಿಕ್ಷಣ ಅಧಿಕಾರಿ ಮಾತನಾಡಿ, ತಂಬಾಕು ಮುಕ್ತ ಜೀವನವು ಕ್ಯಾನ್ಸರ್ ಮುಕ್ತ ಜೀವನಕ್ಕೆ ದಾರಿ, ಇದರಿಂದ ಎಲ್ಲರಿಗು ಆರೋಗ್ಯ ಎಂದು ಹೇಳಿದರು.
ಶ್ರೀಮತಿ ಶ್ರುತಿ ಸಾಲ್ಯಾನ್, ಜಿಲ್ಲಾ ತಂಬಾಕು ತಡೆಗಟ್ಟುವ ಕೋಶ ಇವರು ತಂಬಾಕು ಬೆಳೆಸುವುದರಿಂದ ಬಿಸಾಡುವವರೆಗೂ ಹಲವು ತ್ಯಾಜ್ಯವನ್ನು ಪರಿಸರಕ್ಕೆ ಕೊಡುತ್ತಿದೆ, ಇದರಿಂದ ಪರಿಸರಕ್ಕೆ ಹಾನಿಯಾಗುತ್ತದೆ . ಆದ್ದರಿಂದ ಯುವ ಜನತೆಯಲ್ಲಿ ಈ ಬಗ್ಗೆ ಅರಿವು ಮೂಡಿಸುವುದು ಮುಖ್ಯವಾಗಿದೆ ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಶ್ರೀಮತಿ ಜಾನೆಟ್ ಮಿರಾಂಡಾ, ಉಪಪ್ರಾಂಶುಪಾಲರು, ಯೆನೆಪೋಯ ಶುಶ್ರುಷ ಕಾಲೇಜು, ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಶ್ರೀಮತಿ ರೆನಿಟಾ ಪ್ರಿಯ ಡಿ ಸೋಜಾ ಸ್ವಾಗತಿಸಿದರು.
ಶ್ರೀ ಆನಂದ ವಂದಿಸಿದರು, ಕುಮಾರಿ ಮೇಘಶ್ರೀ ಕಾರ್ಯಕ್ರಮವನ್ನು ನಿರೂಪಿಸಿದರು , ಶ್ರೀ ಕಮಲ್ ಕುಮಾರ್, ಹಿರಿಯ ಡಿಪೋ ಮ್ಯಾನೇಜರ್ , 1st ಡಿಪೋ ಮಂಗಳೂರು, ಶ್ರೀಮತಿ ಪ್ರಿಯ ಪವನ್ ಕುಮಾರ್ ಕಾರ್ಯಕ್ರಮ ಅಭಿವೃದ್ಧಿ ಅಧಿಕಾರಿ, ಕ.ರಾ.ರ. ಸಾ.ನಿ ಮಂಗಳೂರು ಉಪಸ್ಥಿತರಿದ್ದರು. ತಂಬಾಕು ನಿಷೇಧ ಕುರಿತಾದ ರೂಪಕವನ್ನು ಯೆನೆಪೋಯ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಪ್ರದರ್ಶಿಸಿದರು, ಸಾರ್ವಜನಕರಿಂದ ಉತ್ತಮ ಪ್ರತಿಕ್ರಿಯೆ ದೊರಕಿತು.
ಸರಿಸುಮಾರು ೩೦೦ ಜನರು ಕಾರ್ಯಕ್ರಮದ ಪ್ರಯೋಜನವನ್ನು ಪಡೆದರು.