News Karnataka Kannada
Tuesday, May 07 2024
ಮಂಗಳೂರು

ಮಂಗಳೂರು: ವಿಶ್ವ ತಂಬಾಕು ರಹಿತ ದಿನಾಚರಣೆ

Tob
Photo Credit :

ಮಂಗಳೂರು: ಯೆನೆಪೋಯ ನರ್ಸಿಂಗ್ ಕಾಲೇಜಿನ ಎನ್ ಎಸ್ ಎಸ್ ಘಟಕ, ಸಮುದಾಯ ಆರೋಗ್ಯ ಶುಶ್ರುಷ ವಿಭಾಗ ಹಾಗೂ ಮಾದಕ ವ್ಯಸನ ತಡೆಗಟ್ಟುವ ಕೇಂದ್ರ-ಸ್ಯಾಟಲೈಟ್ ಘಟಕ ಇವರು ದಕ್ಷಿಣ ಕನ್ನಡ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಹಯೋಗದೊಂದಿಗೆ ವಿಶ್ವ ತಂಬಾಕು ರಹಿತ ದಿನಾಚರಣೆಯನ್ನು ಜೂನ್ ೧ ೨೦೨೨ ರಂದು ಕ.ರಾ.ರ. ಸಾ.ನಿ ಬಸ್ ನಿಲ್ದಾಣ ಬಿಜೈ ಮಂಗಳೂರು ಇಲ್ಲಿ ಆಯೋಜಿಸಿದರು.

ಕಾರ್ಯಕ್ರಮದ ಅಂಗವಾಗಿ ಲಾಲ್ ಬಾಗ್ ವೃತ್ತದಿಂದ ಬಿಜೈ ಬಸ್ ನಿಲ್ದಾಣದವರೆಗೆ ಜಾಗೃತಿ ಜಾಥಾವನ್ನುತಂಬಾಕು ವ್ಯಸನ ವಿರೋಧಿ ಘೋಷಣೆಯೊಂದಿಗೆ ನಡೆಸಲಾಯಿತು.

ನಂತರ ನಡೆದ ಸಭಾಕಾರ್ಯಕ್ರಮವನ್ನು ಗಣ್ಯರು ಕೃತಕ ಸಿಗರೇಟ್ ಮಾದರಿಯನ್ನು ತುಂಡರಿಸುವ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿ ಶ್ರೀಮತಿ ಜ್ಯೋತಿ, ಜಿಲ್ಲಾ ಆರೋಗ್ಯ ಶಿಕ್ಷಣ ಅಧಿಕಾರಿ ಮಾತನಾಡಿ, ತಂಬಾಕು ಮುಕ್ತ ಜೀವನವು ಕ್ಯಾನ್ಸರ್ ಮುಕ್ತ ಜೀವನಕ್ಕೆ ದಾರಿ, ಇದರಿಂದ ಎಲ್ಲರಿಗು ಆರೋಗ್ಯ ಎಂದು ಹೇಳಿದರು.

ಶ್ರೀಮತಿ ಶ್ರುತಿ ಸಾಲ್ಯಾನ್, ಜಿಲ್ಲಾ ತಂಬಾಕು ತಡೆಗಟ್ಟುವ ಕೋಶ ಇವರು ತಂಬಾಕು ಬೆಳೆಸುವುದರಿಂದ ಬಿಸಾಡುವವರೆಗೂ ಹಲವು ತ್ಯಾಜ್ಯವನ್ನು ಪರಿಸರಕ್ಕೆ ಕೊಡುತ್ತಿದೆ, ಇದರಿಂದ ಪರಿಸರಕ್ಕೆ ಹಾನಿಯಾಗುತ್ತದೆ . ಆದ್ದರಿಂದ ಯುವ ಜನತೆಯಲ್ಲಿ ಈ ಬಗ್ಗೆ ಅರಿವು ಮೂಡಿಸುವುದು ಮುಖ್ಯವಾಗಿದೆ ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ಶ್ರೀಮತಿ ಜಾನೆಟ್ ಮಿರಾಂಡಾ, ಉಪಪ್ರಾಂಶುಪಾಲರು, ಯೆನೆಪೋಯ ಶುಶ್ರುಷ ಕಾಲೇಜು, ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಶ್ರೀಮತಿ ರೆನಿಟಾ ಪ್ರಿಯ ಡಿ ಸೋಜಾ ಸ್ವಾಗತಿಸಿದರು.

ಶ್ರೀ ಆನಂದ ವಂದಿಸಿದರು, ಕುಮಾರಿ ಮೇಘಶ್ರೀ ಕಾರ್ಯಕ್ರಮವನ್ನು ನಿರೂಪಿಸಿದರು , ಶ್ರೀ ಕಮಲ್ ಕುಮಾರ್, ಹಿರಿಯ ಡಿಪೋ ಮ್ಯಾನೇಜರ್ , 1st ಡಿಪೋ ಮಂಗಳೂರು, ಶ್ರೀಮತಿ ಪ್ರಿಯ ಪವನ್ ಕುಮಾರ್ ಕಾರ್ಯಕ್ರಮ ಅಭಿವೃದ್ಧಿ ಅಧಿಕಾರಿ, ಕ.ರಾ.ರ. ಸಾ.ನಿ ಮಂಗಳೂರು ಉಪಸ್ಥಿತರಿದ್ದರು. ತಂಬಾಕು ನಿಷೇಧ ಕುರಿತಾದ ರೂಪಕವನ್ನು ಯೆನೆಪೋಯ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಪ್ರದರ್ಶಿಸಿದರು, ಸಾರ್ವಜನಕರಿಂದ ಉತ್ತಮ ಪ್ರತಿಕ್ರಿಯೆ ದೊರಕಿತು.

ಸರಿಸುಮಾರು ೩೦೦ ಜನರು ಕಾರ್ಯಕ್ರಮದ ಪ್ರಯೋಜನವನ್ನು ಪಡೆದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11671
Media Release

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು