News Karnataka Kannada
Saturday, May 04 2024
ಮಂಗಳೂರು

ಮಂಗಳೂರು ಧರ್ಮಪ್ರಾಂತ್ಯದ ಭಾರತೀಯ ಕಥೊಲಿಕ ಯುವ ಸಂಚಾಲನಕ್ಕೆ 75 ವರ್ಷದ ಸಂಭ್ರಮ

Mangaluru
Photo Credit : News Kannada

ಮಂಗಳೂರು: ಮಂಗಳೂರಿನಲ್ಲಿ 75 ವರ್ಷದ ಸೇವೆ, ನಾಯಕತ್ವ ಹಾಗೂ ಸಮಾಜಕ್ಕೆ ಉತ್ತಮ ಕೊಡುಗೆ ನೀಡಿದ ಭಾರತೀಯ ಕಥೊಲಿಕ ಯುವ ಸಂಚಾಲನದ ಅಮೃತೋತ್ಸವವನ್ನು ಆಚರಿಸುವುದು ನಮಗೆ ಅಭಿಮಾನ. ಇದೇ ಜೂನ್ 12 ರಂದು ವಾಮಂಜೂರು ಚರ್ಚ್ ಸಭಾಭವನದಲ್ಲಿ ಮಧ್ಯಾಹ್ನ 2.15 ರಿಂದ ಕಾರ್ಯಕ್ರಮ ಆರಂಭವಾಗಿ, ಬಲಿಪೂಜೆ, ವೇದಿಕೆ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ, ಯುವಜನರ ಮುಂದಳತ್ವದಲ್ಲಿ ನಡೆಯಲಿರುವುದು.

ಈ ಕಾರ್ಯಕ್ರಮಕ್ಕೆ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅ|ವ|ಪೀಟರ್ ಪಾವ್ಲ್ ಸಲ್ಡಾನಾ, ಕರ್ನಾಟಕ ಪ್ರಾಂತೀಯ ಯುವಜನರ ಮುಖಂಡರಾದ ಅ|ವಂ| ಹೆನ್ರಿ ಡಿ’ಸೋಜಾ, ಧರ್ಮಧ್ಯಕ್ಷರು, ಬಳ್ಳಾರಿ ಧರ್ಮಪ್ರಾಂತ್ಯ, ವಂದನೀಯ ಚೇತನ್ ಮಚಾದೊ, ನಿರ್ದೇಶಕರು, ಐ.ಸಿ.ವೈ.ಎಮ್. ಭಾರತ, ವಂ|ಲೂರ್ಡ್ ರಾಜ್, ನಿರ್ದೇಶಕರು, ಐ.ಸಿ.ವೈ.ಎಮ್. ಕರ್ನಾಟಕ, ವಂ| ಜೇಮ್ಸ್ ಡಿ’ಜೋಜಾ, ಧರ್ಮಗುರುಗಳು, ವಾಮಂಜೂರು, ವಂ|ವಿನ್ಸೆಂಟ್ ಮೊಂತೆರೊ, ಮಾಜಿ ನಿರ್ದೇಶಕರು ,ಐ.ಸಿ.ವೈ.ಎಮ್, ಮಂಗಳೂರು ಧರ್ಮಪ್ರಾಂತ್ಯ, ರಿಚ್ಚಾರ್ಡ್ ಡಿ’ಸೊಜಾ, ಮಾಜಿ ಅಧ್ಯಕ್ಷರು, ಐ.ಸಿ.ವೈ.ಎಮ್, ಮಂಗಳೂರು ಧರ್ಮಪ್ರಾಂತ್ಯ, ಅಡ್ವೊಕೇಟ್ ಆಂತೊನಿ ಜೂಡಿ, ಅಧ್ಯಕ್ಷರು, ಐ.ಸಿ.ವೈ.ಎಮ್ ಭಾರತ, ನೇವಿನ್ ಆಂತೊನಿ, ಅಧ್ಯಕ್ಷರು, ಐ.ಸಿ.ವೈ.ಎಮ್ ಕರ್ನಾಟಕ ಇವರು ಈ ಕಾರ್ಯಕ್ರಮಕ್ಕೆ ಆಗಮಿಸಲಿರುವರು ಹಾಗೂ 75 ವರ್ಷ ಸೇವೆ ಸಲ್ಲಿಸಿದ ಅಧ್ಯಕ್ಷರು, ಹಿತಚಿಂತಕರು ಹಾಗೂ ಮಂಗಳೂರು ಧರ್ಮ ಪ್ರಾಂತ್ಯದ ಯುವಜನರು ಇದರಲ್ಲಿ ಭಾಗಿಯಾಗುವರು.

ಭಾರತೀಯ ಕಥೊಲಿಕ ಯುವ ಸಂಚಾಲನ (ಐ.ಸಿ.ವೈ.ಎಮ್.), ಭಾರತದ ಉತ್ತಮ ಸೇವೆ ನೀಡುವ ಯುವಜನರ ಸಂಚಾಲನದಲ್ಲಿ ಇದೂ ಒಂದು. ಇದು 1947 ಫೆಬ್ರವರಿ 18 ರಂದು ಅಧಿಕೃತ ವಾಗಿ ಮಂಗಳೂರು ಧರ್ಮ ಪ್ರಾಂತ್ಯದಲ್ಲಿ ಸ್ಥಾಪನೆಯಾಯಿತು. 5 ಧರ್ಮಾಧ್ಯಕ್ಷರು, 15 ನಿರ್ದೇಶಕರು, 4 ಧರ್ಮಭಗಿನಿಯರು, ಸುಮಾರು 51 ಅಧ್ಯಕ್ಷರ ಮುಂದಾಳತ್ವದಲ್ಲಿ ಈ ಸಂಚಾಲನದ ಮೂಲಕ ಸಮಾಜಕ್ಕೆ ಉತ್ತಮ ಸೇವಯನ್ನು ನೀಡಿದ್ದಾರೆ. ಪ್ರಸ್ತತ ಅ|ವ| ಡೊ. ಪೀಟರ್ ಪಾವ್ಲ್ ಸಲ್ಡಾನಾ ಇವರ ಮಾರ್ಗದರ್ಶನದಲ್ಲಿ ಈ ಸಂಚಾಲನ 75 ವರ್ಷಗಳ ಸಂಭ್ರಮ ಆಚರಣೆ ಮಾಡಲು ಸಿದ್ಧವಾಗಿದೆ.

ಪ್ರಸ್ತುತ ವ| ಅಶ್ವಿನ್ ಕಾರ್ಡೊಜಾ, ಐ.ಸಿ.ವೈ.ಎಮ್‍. ನಿರ್ದೇಶಕರು; ಜೈಸನ್ ಕ್ರಾಸ್ತಾ, ಐ.ಸಿ.ವೈ.ಎಮ್ ಮಂಗಳೂರು ಧರ್ಮಪ್ರಾಂತ್ಯದ ಅಧ್ಯಕ್ಷರು; ಬ್ಲೇರಿಲ್ ವಿಶ್ಮಾ ಡಿಕುನ್ಹಾ, ಐ.ಸಿ.ವೈ.ಎಮ್ ಮಂಗಳೂರು ಧರ್ಮಪ್ರಾಂತ್ಯದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಜೊತೆ ಇತರ ಪದಾಧಿಕಾರಿಗಳು ಉತ್ತಮ ಸೇವಯನ್ನು ಸಮಾಜಕ್ಕೆ ನೀಡುತ್ತಿದ್ದಾರೆ.

ಇಂದು ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಐ.ಸಿ.ವೈ.ಎಮ್‍. ನಿರ್ದೇಶಕರಾದ ವ| ಅಶ್ವಿನ್ ಕಾರ್ಡೊಜಾರವರು ಭಾರತೀಯ ಕಥೊಲಿಕ ಯುವ ಸಂಚಾಲನದ ಅಮೃತೋತ್ಸವದ ಆಚರಣೆಯ ಬಗ್ಗೆ ಮಾಹಿತಿ ನೀಡಿದರು. ಐ.ಸಿ.ವೈ.ಎಮ್. ಮಂಗಳೂರು ಧರ್ಮಪ್ರಾಂತ್ಯದ ಅಧ್ಯಕ್ಷರಾದ ಜೈಸನ್ ಕ್ರಾಸ್ತಾ, ಐ.ಸಿ.ವೈ.ಎಮ್. ಮಂಗಳೂರು ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕ ಅಧಿಕಾರಿ ಎಲ್ಸಿಟ ಕಾರ್ಡೊಜಾ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರಾದ ಪ್ರದೀಪ್ ರೊಸಾರಿಯೊ ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು