News Karnataka Kannada
Thursday, May 02 2024
ಮಂಗಳೂರು

ಮಂಗಳೂರು: ಕ್ರಿಶ್ಚಿಯನ್ ಪ್ರಾರ್ಥನಾ ಕೇಂದ್ರ ಧ್ವಂಸ

Church
Photo Credit : News Kannada

ಮಂಗಳೂರು : ನಗರ ಹೊರವಲಯದ ಪಂಜಿಮೊಗರಿನ ಉರುಂದಾಡಿ ಖುರ್ಸು ಗುಡ್ಡೆಯಲ್ಲಿ ಪ್ರಾರ್ಥನಾ ಕೇಂದ್ರ ಒಡೆದಿರುವ ಬಗ್ಗೆ ತಕರಾರು ಎದ್ದಿದೆ.  ಕ್ರಿಶ್ಚಿಯನ್ನರ ಪ್ರಕಾರ ನಲವತ್ತು ವರ್ಷಗಳಿಂದಲೂ ಹೋಲಿಕ್ರಾಸ್ ಇದೆಯಂತೆ ಕಟ್ಟಡದಲ್ಲಿ ಪ್ರಾರ್ಥನ ನಡೆಸುತ್ತಿದ್ದರಂತೆ ಈಗಲೂ ಹಳೆಯ ಹೋಲಿಕ್ರಾಸ್ ಸ್ಥಳದಲ್ಲಿವೆ ಆದರೆ ಈಗ ವಿವಾದಕ್ಕೆ ಕಾರಣವಾಗಿದ್ದು ಅಲ್ಲಿದ್ದ ಹಳೆಯ ಕಟ್ಟಡ ಒಂದನ್ನು ಏಕಾಏಕಿ ಕೆಡವಿ ಹಾಕಿದ್ದು ಈ ಬಗ್ಗೆ ಸ್ಥಳೀಯರಲ್ಲಿ ಕೇಳಿದರೆ ಬೇರೆಯದ್ದೇ ಮಾತು ಹೇಳುತ್ತಾರೆ .

ಉರುಂದಾಡಿ ಯಲ್ಲಿ ಹಿಂದಿನಿಂದಲೂ ಅಂಗನವಾಡಿ ಇತ್ತಂತೆ ಸರಕಾರಿ ಜಾಗದಲ್ಲಿ ಅಂಗನವಾಡಿ ಕಟ್ಟಡ ಇದ್ದರೂ ಅದನ್ನು ಕ್ರಿಶ್ಚಿಯನ್ನರು ನೋಡಿಕೊಂಡಿದ್ದರು ಕಟ್ಟಡದ 1ಬದಿಯಲ್ಲಿ ಅಂಗನವಾಡಿ ಮತ್ತೊಂದು ಬದಿಯಲ್ಲಿ ಪ್ರಾರ್ಥನೆಗೆಂದು ಕೊಠಡಿ ಇತ್ತಂತೆ ಆದರೆ ಕಟ್ಟಡವು ಶಿಥಿಲವಾಗಿದ್ದರಿಂದ ಹೊಸದಾಗಿ ಕಟ್ಟಡ ಕಟ್ಟಲು ಶಿಶು ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಇತ್ತೀಚೆಗೆ ಸರ್ವೇ ನಡೆಸಲಾಗಿತ್ತು.

ಸರಕಾರಿ ಜಾಗದಲ್ಲಿ ಅಂಗನವಾಡಿ ಕಟ್ಟಡ ಇರುವುದರಿಂದ ಹೊಸದಾಗಿ ಕಟ್ಟಡ ನಿರ್ಮಾಣಕ್ಕೆ ಅಂದಾಜು 16ಲಕ್ಷ ರೂ ಅನುದಾನ ಬಿಡುಗಡೆಯಾಗಿದ್ದು ಅದಕ್ಕಾಗಿ ಟೆಂಡರ್ ಕೂಡ ಆಗಿತ್ತು ಎನ್ನಲಾಗುತ್ತಿದೆ .ಅದರಂತೆ ಶನಿವಾರ ಮಧ್ಯಾಹ್ನ ಟೆಂಡರ್ ಪಡೆದ ಗುತ್ತಿಗೆದಾರ ಜೆಸಿಬಿ ತಂದು ಹಳೆ ಕಟ್ಟಡವನ್ನು ಕೆಡವಿ ಹಾಕಿದ್ದಾರೆ ಆದರೆ ಯಾರು ಕೆಡವಿ ಹಾಕಿದ್ದಾರೆಂದು ನಮಗೆ ಗೊತ್ತಿಲ್ಲ ಎನ್ನುತ್ತಾರೆ ಸ್ಥಳೀಯರು .

ಏಕಾಏಕಿ ಬಂದು ಕಟ್ಟಡವನ್ನು ಕೆಡವಿ ಸ್ಥಳಿಯ ಕ್ರಿಶ್ಚಿಯನ್ನರನ್ನು ಕೆರಳಿಸಿದೆ ಕಟ್ಟಡದ ಒಳಗೆ ಶಿಲುಬೆ , ಪವಿತ್ರ ಬೈಬಲ್ ಇತ್ತು ಅದರ ತೆರವು ಮಾಡದೆ ಏಕಾಏಕಿ ಕೆಡವಿ ಹಾಕಿದ್ದಾರೆ. ನಾವು ಏನು ಪಾಪ ಮಾಡಿದ್ದೇವೆ ಎಂದು ಸ್ಥಳೀಯ ಕ್ರೈಸ್ತರು ಆತಂಕ ತೋಡಿಕೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು