ಮಂಗಳೂರು : ಮಂಗಳೂರು ವಕೀಲರ ಸಂಘದ ಸದಸ್ಯರು ಹಿರಿಯ ವಕೀಲರು ಹಾಗೂ ನೋಟರಿ, ಶ್ರೀ ಎಂ.ಜಗನಾಥ್ (89) ಇವರು ಅಲ್ಪಕಾಲದ ಅಸೌಖ್ಯದಿಂದ ಇಂದು ದೈವಾಧೀನ ರಾಗಿರುತ್ತಾರೆ.
ಕೇಂದ್ರದ ಮಾಜಿ ಸಚಿವ, ವಕೀಲರಾದ ಜನಾರ್ದನ ಪೂಜಾರಿಯವರಿಗೆ ವಕೀಲಿಕೆಯಲ್ಲಿ ಪ್ರಥಮ ಶಿಷ್ಯರಾಗಿದ್ದ ಜಗನ್ನಾಥ ಅವರು, ಇಬ್ಬರು ಪುತ್ರಿಯರು, ಒರ್ವ ಪುತ್ರ ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಜನಾರ್ದನ ಪೂಜಾರಿಯವರ ಕಚೇರಿಯಲ್ಲಿ ಇತ್ತೀಚಿನ ದಿನಗಳ ವರೆಗೂ ಕರ್ತವ್ಯ ನಿರ್ವಹಿಸಿದ್ದ ಅವರು ಕಳೆದ ಕೆಲ ದಿನಗಳಿಂದ ವಯೋಸಹಜ ಅಸ್ವಸ್ಥತೆಯಿಂದ ಬಳಲುತ್ತಿದ್ದರು. ಅವರ ಕುಟುಂಬ ವರ್ಗಕ್ಕೆ ಈ ಅಗಲಿಕೆಯ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಮಂಗಳೂರು ವಕೀಲರ ಸಂಘ ಸಂತಾಪ ಸೂಚಿಸಿದೆ.