ಮಂಗಳೂರು : ಕಳವು ಆರೋಪಿಯೊಬ್ಬ ಪೊಲೀಸ್ ಗೆ ಚೂರಿ ಇರಿದು ಪರಾರಿಯಾದ ಘಟನೆ ಸೋಮವಾರ ಸಂಜೆ ನಗರದಲ್ಲಿ ನಡೆದಿದೆ.
ನಗರದ ಸೆಂಟ್ರಲ್ ಮಾರ್ಕೆಟ್ ಬಳಿ ಯುವಕನೊಬ್ಬ ಕಳ್ಳತನ ಮಾಡಿದ ಸಾಮಗ್ರಿ ಮಾರಾಟ ಮಾಡಲು ಬಂದಿದ್ದಾನೆ ಎಂಬ ಮಾಹಿತಿಯ ಮೇರೆಗೆ ಕದ್ರಿ ಠಾಣೆಯ ಪೊಲೀಸರು ಸ್ಥಳಕ್ಕೆ ತೆರಳಿ ಆರೋಪಿಯನ್ನು ಹಿಡಿಯಲು ಮುಂದಾದರು.
ಆ ವೇಳೆ ಪೊಲೀಸ್ ಸಿಬ್ಬಂದಿ ವಿನೋದ್ ಆರೋಪಿಯು ಚೂರಿ ಅಂತಹ ಆಯುಧದಿಂದ ಇರಿದು ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ.
ಕಲವು ಆರೋಪಿಯಿಂದ ಇರಿತಕ್ಕೊಳಗಾದ ವಿನೋದ ರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಾಣಕ್ಕೆ ಅಪಾಯವಿಲ್ಲ ಕಾಸರಗೋಡು ಮೂಲದ ಕಳ್ಳ ಕದ್ದ ವಾಚ್ ಅನ್ನು ಮಾರಾಟ ಮಾಡಲು ಯತ್ನಿಸಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದ್ದು ಎಂದು ಪೊಲೀಸ್ ಆಯುಕ್ತರು ಶಶಿಕುಮಾರ್ ತಿಳಿಸಿದ್ದಾರೆ.