News Karnataka Kannada
Monday, April 29 2024
ಮಂಗಳೂರು

ಭರತನಾಟ್ಯ ವಿದ್ವತ್ ಅಂತಿಮ ಪರೀಕ್ಷೆಯಲ್ಲಿ ವಂದನಾರಾಣಿಗೆ ಪ್ರಥಮ ಸ್ಥಾನ

Vandana Rani
Photo Credit : News Kannada

ಭರತಾಂಜಲಿಯ ಹಿರಿಯ ಶಿಷ್ಯೆಯರಲ್ಲಿಒಬ್ಬಳಾದ ವಂದನಾರಾಣಿ, ಇವರು ಕೆಎಸ್ಇಇಬಿ ನಡೆಸಿದ ವಿದ್ವತ್ ಅಂತಿಮ ಪರೀಕ್ಷೆಗಳನ್ನು ಪರ‍್ಣಗೊಳಿಸಿ, ದಕ್ಷಿಣ ಕನ್ನಡ ಪ್ರದೇಶದಲ್ಲಿ  ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಆಕೆಯ ಭರತನಾಟ್ಯದ ಪಯಣದಲ್ಲಿ ಹದಿನಾಲ್ಕು ವರ್ಷಗಳ ಕಾಲ ನಿರಂತರ ಪರಿಶ್ರಮ, ಕೊನೆಯಿಲ್ಲದ ಉತ್ಸಾಹ ಮತ್ತು ಸಾಟಿಯಿಲ್ಲದ ಅಭ್ಯಾಸಗಳು  ಈ ಗಮನಾರ್ಹ ಸಾಧನೆಯನ್ನುಸಾಧ್ಯವಾಗಿಸಿದೆ!

ವಂದನಾ ರಾಣಿ, ಶ್ರೀ ಕೇದಿಗೆ ವಸಂತ ರಾವ್ ಮತ್ತು ಶ್ರೀಮತಿ ರೂಪಾ ರಾಣಿ ಅವರ ಪುತ್ರಿ. ಗುರು ಶ್ರೀಮತಿ ಪ್ರತಿಮಾ ಶ್ರೀಧರ್ ಮತ್ತು ಗುರು ಶ್ರೀಧರ್ ಹೊಳ್ಳ, ಭರತಾಂಜಲಿ, ಮಂಗಳೂರು ಇವರ ಶಿಷ್ಯೆ. ಇವರು 2021 ರಲ್ಲಿ ವಿದ್ವತ್ ಆಂತಿಮ ಪರೀಕ್ಷೆಯಲ್ಲಿ 87% (ಡಿಸ್ಟಿಂಕ್ಷನ್) ಗಳಿಸಿದ್ದಾರೆ. ಇವರು ಭರತಾಂಜಲಿಯ ಪ್ರಮುಖ ನೃತ್ಯಗಾರರಲ್ಲಿ ಒಬ್ಬರು ಮತ್ತು ಚಿದಂಬರದಲ್ಲಿ ನಾಟ್ಯಾಂಜಲಿ ಉತ್ಸವ, ಮೈಸೂರು ದಸರಾ, ಹಂಪಿ ಉತ್ಸವ, ಆಳ್ವಾಸ್ ನುಡಿಸಿರಿ ಮುಂತಾದ ಪ್ರತಿಷ್ಠಿತ ಉತ್ಸವಗಳಲ್ಲಿ ತಮ್ಮ ಗುರುಗಳೊಂದಿಗೆ ಪ್ರದರ್ಶನ ನೀಡಿದ್ದಾರೆ.

ಕರ್ನಾಟಕ ಸಂಗೀತದಲ್ಲಿ ಹಿರಿಯ ಶ್ರೇಣಿಯನ್ನು ಪೂರ್ಣಗೊಳಿಸಿದ ಇವರು, ಗುರು ಶ್ರೀಮತಿ ಸತ್ಯವತಿ ಮುಡಂಬಡಿತ್ತಾಯ, ಮಂಗಳೂರು ಅವರಲ್ಲಿ ಒಂದು ದಶಕದ ತರಬೇತಿಯನ್ನು ಮತ್ತು ಗುರು ಶ್ರೀ ಮಧೂರು ಬಾಲಸುಬ್ರಹ್ಮಣ್ಯ, ಉಡುಪಿ ಇವರಲ್ಲಿ ಸಂಗೀತ ತರಬೇತಿಯನ್ನು ಪಡೆದಿದ್ದಾರೆ.  ವಂದನಾ ರಾಣಿ ಅನೇಕ ಗಮನಾರ್ಹವಾದ ನಿರೂಪಣೆಗಳನ್ನು ಹೊಂದಿ ಅವರು ಭರತಾಂಜಲಿಯ ಕೆಲವು ಉತ್ಸವಗಳು ಮತ್ತು ಪ್ರದರ್ಶನಗಳಿಗೆ ಹಿನ್ನೆಲೆ ಗಾಯಕಿಯಾಗಿ ಹಾಡುಗಾರಿಕೆ ಮಾಡಿದ್ದಾರೆ. ಇವರು ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜಿನಲ್ಲಿ (ಆಟೊನೊಮಸ್) ಶುದ್ಧ ವಿಜ್ಞಾನದಲ್ಲಿ ಪದವಿಯನ್ನು ಪೂರ್ಣಗೊಳಿಸಿದ್ದಾರೆ ಮತ್ತು ಪ್ರಸ್ತುತ ತಮಿಳುನಾಡಿನ ಚಿದಂಬರಂನ ಅಣ್ಣಾಮಲೈ ವಿಶ್ವವಿದ್ಯಾಲಯದಿಂದ ಭರತನಾಟ್ಯದಲ್ಲಿ ಸ್ನಾತಕೋತ್ತರ ಅಧ್ಯಯನವನ್ನು ಮಾಡುತ್ತಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು