ಮಂಗಳೂರು: ರಾಜ್ಯದಲ್ಲಿ ಬಿಜೆಪಿ ಸರಕಾರದ ಆಡಳಿತದಿಂದ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು ಅರಾಜಕತೆಯು ಸೃಷ್ಟಿಯಾಗಿದೆ.
ಸಂಘಪರಿವಾರ ಪ್ರೇರಿತ ಶಕ್ತಿಗಳು ರಾಜ್ಯದಲ್ಲಿ ದ್ವೇಷವನ್ನು ಹರಡಿಸುತ್ತಾ ಸಮಾಜದ ಸ್ವಾಸ್ಥ್ಯವನ್ನು ಕೆಡಿಸುತ್ತಿದ್ದಾರೆ ಈ ಎಲ್ಲಾ ವಿಚಾರಗಳ ವಿರುದ್ಧವಾಗಿ ಎಸ್ ಡಿಪಿಐ ನಾಳೆ ಎಪ್ರಿಲ್ 01 ಶುಕ್ರವಾರದಂದು ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಿದ್ದು ಇದರ ಭಾಗವಾಗಿ ಎಸ್ ಡಿಪಿಐ ದ.ಕ ಜಿಲ್ಲಾ ಸಮಿತಿ ವತಿಯಿಂದ ಪುತ್ತೂರಿನಲ್ಲಿ ಸಂಜೆ 3:30 ಗಂಟೆಗೆ ಸರಿಯಾಗಿ ದರ್ಬೆ ವೃತ್ತದಿಂದ ಎ.ಸಿ ಕಛೇರಿ ವರೆಗೆ ಬೃಹತ್ ಕಾಲ್ನಡಿಗೆ ಜಾಥಾ ಮತ್ತು ಪ್ರತಿಭಟನಾ ಸಭೆ ನಡೆಯಲಿದೆ .
ಈ ಪ್ರತಿಭಟನಾ ಜಾಥಾಕ್ಕೆ ಸಂವಿಧಾನ ಪ್ರೇಮಿಗಳಾದ ಏಲ್ಲಾ ನಾಗರಿಕರು ಭಾಗವಹಿಸುವ ಮೂಲಕ ಸರಕಾರದ ಜನವಿರೋಧಿ ನೀತಿಗಳನ್ನು ಖಂಡಿಸಬೇಕೆಂದು ಎಂದು ಎಸ್ ಡಿಪಿಐ ಜಿಲ್ಲಾ ಕಾರ್ಯದರ್ಶಿ ಶಾಕಿರ್ ಅಳಕೆಮಜಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.