ಬಂಟ್ವಾಳ : ಪುರಸಭೆಯ ಪೌರಕಾರ್ಮಿಕೆಯೋರ್ವಳಿಗೆ ಪೌರಕಾರ್ಮಿಕನೋರ್ವ ಹಲ್ಲೆ ನಡೆಸಿದ ಘಟನೆ ಪುರಸಭಾ ವ್ಯಾಪ್ತಿಯ ತ್ಯಾಗರಾಜ ರಸ್ತೆಯಲ್ಲಿ ನಡೆದಿದೆ.
ಪೌರ ಕಾರ್ಮಿಕೆ ಸರೋಜ (30) ಎಂಬವರಿಗೆ ಪೌರ ಕಾರ್ಮಿಕ ವಿನೋದ್ ಗುಡಿಸಲು ಉಪಯೋಗಿಸುವ ಪೊರಕೆ ಕೋಲಿನಿಂದ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದ್ದು, ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ದಾಖಲಾಗಿದ್ದಾರೆ. ಬೇರೆ ಊರಿನಿಂದ ಬಂದು ಇಲ್ಲಿ ಕೆಲಸ ಮಾಡಬಾರದು ನೀನು ಕೆಲಸ ಬಿಟ್ಟು ತೊಲಗಬೇಕು ಎಂದು ಎಂದು ಸ್ಥಳೀಯ ಪೌರ ಕಾರ್ಮಿಕ ಬೆದರಿಕೆ ಹಾಕುತ್ತಿದ್ದು, ಇಂದು ಬೆಳಿಗ್ಗೆ ಸರೋಜ ಅವರು ಕರ್ತವ್ಯ ದಲ್ಲಿರುವ ವೇಳೆವಿನೋದ್ ಹಲ್ಲೆ ನಡೆಸಿದ್ದಾನೆ ಎಂದು ದೂರು ನೀಡಿದ್ದಾರೆ. ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.