News Karnataka Kannada
Tuesday, May 07 2024
ಮಂಗಳೂರು

ಬಂಟ್ವಾಳ ತಾಲೂಕಿನಾದ್ಯಂತ ಕಳೆದೆರಡು ದಿನಗಳಿಂದ ನಿರಂತರವಾಗಿ ಧಾರಾಕಾರ ಮಳೆ

Bengaluru: A depression in the Bay of Bengal, rains lash Karnataka again
Photo Credit :
ಬಂಟ್ವಾಳ:  ತಾಲೂಕಿನಾದ್ಯಂತ ಕಳೆದೆರಡು ದಿನಗಳಿಂದ ನಿರಂತರವಾಗಿ ಧಾರಾಕಾರ ಮಳೆಯಾಗಿದ್ದು, ಹಲವೆಡೆ ಮಳೆಹಾನಿ ಪ್ರಕರಣಗಳೂ ವರದಿಯಾಗಿದೆ.
ಮಾಣಿ  ಹಿರಿಯ ಪ್ರಾಥಮಿಕ ಶಾಲೆಯ ಆವರಣ ಗೋಡೆ ಕುಸಿದು ಬಿದ್ದು ಹಾನಿ ಸಂಭವಿಸಿದೆ, ಮಾಣಿ ಗ್ರಾಮದ ಕೋಚಪಲ್ಕೆ ನಿವಾಸಿ ಕೆ ನೆಬಿಸ ರವರ ಮನೆಗೆ ಭಾಗಶಃ ಹಾನಿಯಾಗಿದೆ, ಪೆರಾಜೆ ಗ್ರಾಮದ ಅಡ್ಕರೇಕೋಡಿ ನಿವಾಸಿ ಸಾಂತಪ್ಪ  ಪೂಜಾರಿ ಅವರ ವಾಸ್ತವ್ಯದ ಮನೆ ಭಾಗಶಃ ಹಾನಿಗೊಳಗಾಗಿದೆ, ಬಾಳ್ತಿಲ ಗ್ರಾಮದ ಬೆರ್ಕಳ ನಿವಾಸಿ ಸಂತಾನ್ ವೇಗಸ್  ಅವರ ಅಡಿಕೆ ತೋಟಕ್ಕೆ ಮಳೆ-ಗಾಳಿಯಿಂದ ಹಾನಿಯಾಗಿದೆ, ಅದೇ ಪರಿಸರದ ಬಿ ರಾಜೇಂದ್ರ ಅವರ ಅಡಿಕೆ ತೋಟ ಹಾಗೂ ಸಾವಿತ್ರಿ  ಅವರ ಅಡಿಕೆ ತೋಟ ಹಾಗೂ ರಬ್ಬರ್ ತೋಟ ಮಳೆ ಗಾಳಿಯಿಂದ ಹಾನಿಯಾಗಿದೆ.
ಪೆರಾಜೆ ಗ್ರಾಮದ ಜೋಗಿಬೆಟ್ಟು ನಿವಾಸಿ ಫಾತಿಮತ್ ಬುಶ್ರ  ಅವರ ಮನೆಯ ಶೀಟ್ ಮೇಲೆ ಅಡಿಕೆ ಮತ್ತು ಹಲಸಿನ ಮರ ಬಿದ್ದು ಹಾನಿ ಸಂಭವಿಸಿದೆ, ಪೆರಾಜೆ ಗ್ರಾಮದ ಬುಡೋಳಿ ನಿವಾಸಿ ಉಮ್ಮರ್ ಅವರ ವಾಸ್ತವ್ಯ ಇಲ್ಲದ ಹಳೆಯ ಮನೆ ಗಾಳಿ ಮಳೆಗೆ ಹಾನಿಯಾಗಿದೆ ಎಂದು ತಾಲೂಕು ಕಚೇರಿ ಮಳೆಹಾನಿ ವಿಷಯ ನಿರ್ವಾಹಕ ವಿಶು ಕುಮಾರ್ ಮಾಹಿತಿ ನೀಡಿದ್ದಾರೆ.
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
153
Mounesh V

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು