ಬೆಳ್ತಂಗಡಿ: ಚಿಬಿದ್ರೆ ಗ್ರಾಮದ ಮುಕ್ಕಡ ಮನೆಯ ಪ್ರಗತಿಪರ ಕೃಷಿಕ ನಾರಾಯಣ ಶೆಟ್ಟಿ (86 ) ಅವರು ಅಲ್ಪ ಕಾಲದ ಅಸ್ವಾಸ್ಥ್ಯದಿಂದ ಮೇ 10 ರಂದು ಮದ್ಯಾಹ್ನ ಸ್ವಗೃಹದಲ್ಲಿ ನಿಧನರಾದರು.
ಅವರು ಮುಂಡಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ಮಾಜಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಅವರು ಪತ್ನಿ , ಪುತ್ರ,ವಿಜಯ ಕ್ರೆಡಿಟ್ ಸೊಸೈಟಿಯ ಗುರುವಾಯನಕೆರೆ ಶಾಖೆಯ ಮ್ಯಾನೇಜರ್ ಸಂತೋಷ್ ಸಹಿತ ಏಳು ಮಂದಿ ಪುತ್ರಿಯರನ್ನು ಅಗಲಿದ್ದಾರೆ.