ಮಂಗಳೂರು : ಪೊಲೀಸರ ಭರ್ಜರಿ ಕಾರ್ಯಾಚರಣೆಗೆ ಕುಖ್ಯಾತ ಏಳು ಜನ ಸರಗಳ್ಳರ ಬಂಧನ. 15 ಲಕ್ಷ ಬೆಲೆ ಬಾಳುವ ಸೊತ್ತುಗಳ ವಶ. 13 ಸರಗಳ್ಳತನ, 5 ಸರಗಳ್ಳತನಕ್ಕೆ ಯತ್ನ, 3 ದ್ವಿಚಕ್ರ ವಾಹನ ಕಳ್ಳತನ, 2 ರಾಬರಿ, 1 ಪೊಲೀಸ್ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದ ಒಟ್ಟು ಏಳು ಜನ ಆರೋಪಿಗಳು ಅಬ್ದುಲ್ ಇಶಾಮ್, ಸಪ್ವಾನ್, ಮೊಹಮ್ಮದ್ ತೌಸೀಪ್, ಅಬ್ದುಲ್ ಖಾದರ್ ಸಿನಾನ್, ಮೊಹಮ್ಮದ್ ಪಜಲ್, ಅರ್ಷಾದ್, ಮುಜಾಹಿದುರ್ ರೆಹಮಾನ್ ಬಂಧಿತ ಆರೋಪಿಗಳು ಮಹಿಳೆಯರ ಕುತ್ತಿಗೆಯಿಂದ ಸರ ಎಳೆದು ಪರಾರಿಯಾಗುತ್ತಿದ್ದರು.
ಸಿ.ಸಿ ಕ್ಯಾಮರಾ ಇಲ್ಲದ ಕಡೆ ಕೃತ್ಯ ಎಸಗುತ್ತಿದ್ದ ಖತರ್ನಾಕ್ ಕಳ್ಳರು ಕದ್ದ ಬೈಕ್ ನ್ನೇ ಕೃತ್ಯಕ್ಕೆ ಬಳಸುತ್ತಿದ್ದ ಖದೀಮರು ಪೊಲೀಸರಿಗೆ ಯಾವುದೇ ಸುಳಿವು ಸಿಗದಂತೆ ಕೃತ್ಯ ಎಸಗುತ್ತಿದ್ದ ಆರೋಪಿಗಳು ಸರಣಿ ಸರಗಳ್ಳತನ ಪ್ರಕರಣ ಭೇದಿಸಲು ವಿಶೇಷ ತಂಡ ರಚಿಸಿದ್ದ ಮಂಗಳೂರು ನಗರ ಪೊಲೀಸ್ ಕಮೀಷನರ್ ಕೊನೆಗೂ ಅಂದರ್ ಆದ ಖತರ್ನಾಕ್ ಕಳ್ಳರು ಪ್ರಕರಣ ಭೇಧಿಸಿದ ಪೊಲೀಸ್ ತಂಡಕ್ಕೆ ನಗದು ಬಹುಮಾನ ನೀಡಿದ ಕಮೀಷನರ್ ಎನ್.ಶಶಿಕುಮಾರ್ 25 ಸಾವಿರ ನಗದು ಬಹುಮಾನ ನೀಡಿದರು.