ಮಂಗಳೂರು : ಭಾರತ ಕಮ್ಯುನಿಸ್ಟ್ ಪಕ್ಷ ಮಾರ್ಕ್ಸ್ ವಾದಿ ಇದರ 23ನೇ ದ.ಕ ಜಿಲ್ಲಾ ಸಮ್ಮೇಳನವು ನವೆಂಬರ್ 22 , 23ರಂದು ಗುರುಪುರ ಕೈಕಂಬದಲ್ಲಿ ನಡೆಯಲಿದ್ದು ಇದರ ಸ್ವಾಗತ ಸಮಿತಿ ರಚನಾಸಭೆಯು ತಾ 20/9/2021ರಂದು ಗುರುಪುರ-ಕೈಕಂಬದ ಪ್ರೀಮಿಯರ್ ಹಾಲ್ ನಲ್ಲಿ ಸಿಪಿಐಎಂ ಪಕ್ಷದ ಹಿರಿಯ ಮುಖಂಡರಾದ ಕೆ. ಗಂಗಯ್ಯ ಅಮೀನ್ ರ ಅಧ್ಯಕ್ಷತೆಯಲ್ಲಿ ನಡೆಯಿತು. ಸಮಿತಿ ರಚನಾ ಸಭೆಯನ್ನು ಉದ್ದೇಶಿಸಿ ಪಕ್ಷದ ದಕ ಜಿಲ್ಲಾ ಸಮಿತಿ ಸದಸ್ಯರಾದ ಮುನೀರ್ ಕಾಟಿಪಳ್ಳ ಅವರು ಮಾತನಾಡುತ್ತಾ ತುಳುನಾಡು ತಳಸಮುದಾಯಗಳು ನಡೆಸಿದ ಚಾರಿತ್ರಿಕ ಹಿನ್ನೆಲೆಯನ್ನು ಹೊಂದಿರುವ ನಾಡು. ಇಲ್ಲಿನ ಇತಿಹಾಸವನ್ನು ಗಮನಿಸಿದರೆ ರೈತ ಚಳುವಳಿಗಳು ನೆಯ್ಗೆಕಾರ್ಮಿಕರ ಚಳುವಳಿ, ಹಂಚು, ಬೀಡಿ ಕಾರ್ಮಿಕ ಚಳುವಳಿ, ಹೀಗೆ ಅನೇಕ ಚಳುವಳಿಗಳನ್ನು ಹುಟ್ಟುಹಾಕಿದ ಮತ್ತು ಪರಸ್ಪರ ಸೌಹಾರ್ದತೆಯನ್ನು ಬೆಸೆದುಕೊಂಡಿರುವ ನಾಡು ಆದರೆ ಇಂದು ಹಲವು ರಾಜಕೀಯ ಹಿತಾಸಕ್ತಿಗಳಿಗಾಗಿ ಇಲ್ಲಿನ ಪಾರಂಪರಿಕ ಸೌಹಾರ್ದತೆಯನ್ನು, ಚಳವಳಿಯ ಪರಂಪರೆಯನ್ನು ಇಲ್ಲವಾಗಿಸುವ ಪ್ರಯತ್ನ ನಡೆಯುತ್ತಿದೆ. ಈ ನಿಟ್ಟಿನಲ್ಲಿ ದುಡಿಯುವ ಜನ ವರ್ಗದ ಪಕ್ಷದ ಜಿಲ್ಲಾ ಸಮ್ಮೇಳನದ ಸಂದರ್ಭ ಗಂಭೀರ ಚರ್ಚೆ ನಡೆಯಬೇಕಿದೆ. ಈ ಸಮ್ಮೇಳನದೊಂದಿಗೆ ಇಲ್ಲಿನ ಸೌಹಾರ್ದ ಪರಂಪರೆಯನ್ನು ಎತ್ತಿ ಹಿಡಿಯುತ್ತ ಮತ್ತೆ ಜನತೆಗೆ ತುಳುನಾಡಿನ ಇತಿಹಾಸವನ್ನು ನೆನಪಿಸುವ ಕೆಲಸವಾಗಬೇಕಿದೆ ಎಂದರು.
ಈ ಸಭೆಯಲ್ಲಿ ಸಮ್ಮೇಳನದ ಯಶಸ್ಸಿನ ಕುರಿತು ಚರ್ಚಿಸಲಾಯಿತು. ಸಭೆಯಲ್ಲಿ ದ.ಕ. ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಯುಬಿ.ಲೋಕಯ್ಯ,
ಜೆ ಬಾಲಕೃಷ್ಣ ಶೆಟ್ಟಿ,ಯಾದವ ಶೆಟ್ಟಿ, ಪಕ್ಷದ ಗುರುಪುರ ವಲಯ ಮುಖಂಡರಾದ ವಸಂತಿ ಕುಪ್ಪೆಪದವು ಆನಂದ ಇರುವೈಲು,ಅಶೋಕ್ ತಾರಿಗುಡ್ಡೆ, ಹೊನ್ನಯ್ಯ ಅಮೀನ್, ಮನೋಜ್ ವಾಮಂಜೂರ್, NA. ಹಸನಬ್ಬ ಸಿಪಿಐಎಂ ಗುರುಪುರ ವಲಯ ಕಾರ್ಯದರ್ಶಿ ಸದಾಶಿವದಾಸ್ ಮೊದಲಾದವರು ಉಪಸ್ಥಿತರಿದ್ದರು.