News Karnataka Kannada
Sunday, May 12 2024
ಮಂಗಳೂರು

ನವೆಂಬರ್ 22, 23 ಸಿಪಿಐಎಂ ದ.ಕ ಜಿಲ್ಲಾ ‌ಸಮ್ಮೇಳನ

New Project 2021 09 21t213706.585
Photo Credit :
ಮಂಗಳೂರು : ಭಾರತ ಕಮ್ಯುನಿಸ್ಟ್ ಪಕ್ಷ ಮಾರ್ಕ್ಸ್ ವಾದಿ ಇದರ 23ನೇ ದ.ಕ ಜಿಲ್ಲಾ ಸಮ್ಮೇಳನವು ನವೆಂಬರ್ 22 , 23ರಂದು ಗುರುಪುರ ಕೈಕಂಬದಲ್ಲಿ ನಡೆಯಲಿದ್ದು ಇದರ ಸ್ವಾಗತ ಸಮಿತಿ ರಚನಾಸಭೆಯು ತಾ 20/9/2021ರಂದು ಗುರುಪುರ-ಕೈಕಂಬದ ಪ್ರೀಮಿಯರ್ ಹಾಲ್ ನಲ್ಲಿ ಸಿಪಿಐಎಂ ಪಕ್ಷದ ಹಿರಿಯ ಮುಖಂಡರಾದ ಕೆ. ಗಂಗಯ್ಯ ಅಮೀನ್ ರ ಅಧ್ಯಕ್ಷತೆಯಲ್ಲಿ ನಡೆಯಿತು. ಸಮಿತಿ ರಚನಾ ಸಭೆಯನ್ನು ಉದ್ದೇಶಿಸಿ ಪಕ್ಷದ ದಕ ಜಿಲ್ಲಾ ಸಮಿತಿ ಸದಸ್ಯರಾದ ಮುನೀರ್ ಕಾಟಿಪಳ್ಳ ಅವರು ಮಾತನಾಡುತ್ತಾ ತುಳುನಾಡು ತಳಸಮುದಾಯಗಳು ನಡೆಸಿದ ಚಾರಿತ್ರಿಕ ಹಿನ್ನೆಲೆಯನ್ನು ಹೊಂದಿರುವ ನಾಡು. ಇಲ್ಲಿನ ಇತಿಹಾಸವನ್ನು ಗಮನಿಸಿದರೆ ರೈತ ಚಳುವಳಿಗಳು ನೆಯ್ಗೆಕಾರ್ಮಿಕರ ಚಳುವಳಿ, ಹಂಚು, ಬೀಡಿ ಕಾರ್ಮಿಕ ಚಳುವಳಿ, ಹೀಗೆ ಅನೇಕ ಚಳುವಳಿಗಳನ್ನು ಹುಟ್ಟುಹಾಕಿದ ಮತ್ತು ಪರಸ್ಪರ ಸೌಹಾರ್ದತೆಯನ್ನು ಬೆಸೆದುಕೊಂಡಿರುವ ನಾಡು ಆದರೆ ಇಂದು ಹಲವು ರಾಜಕೀಯ ಹಿತಾಸಕ್ತಿಗಳಿಗಾಗಿ ಇಲ್ಲಿನ ಪಾರಂಪರಿಕ ಸೌಹಾರ್ದತೆಯನ್ನು, ಚಳವಳಿಯ ಪರಂಪರೆಯನ್ನು ಇಲ್ಲವಾಗಿಸುವ ಪ್ರಯತ್ನ ನಡೆಯುತ್ತಿದೆ. ಈ ನಿಟ್ಟಿನಲ್ಲಿ ದುಡಿಯುವ ಜನ ವರ್ಗದ ಪಕ್ಷದ ಜಿಲ್ಲಾ ಸಮ್ಮೇಳನದ ಸಂದರ್ಭ ಗಂಭೀರ ಚರ್ಚೆ ನಡೆಯಬೇಕಿದೆ. ಈ ಸಮ್ಮೇಳನದೊಂದಿಗೆ ಇಲ್ಲಿನ ಸೌಹಾರ್ದ ಪರಂಪರೆಯನ್ನು ಎತ್ತಿ ಹಿಡಿಯುತ್ತ ಮತ್ತೆ ಜನತೆಗೆ ತುಳುನಾಡಿನ ಇತಿಹಾಸವನ್ನು ನೆನಪಿಸುವ ಕೆಲಸವಾಗಬೇಕಿದೆ ಎಂದರು.
ಈ ಸಭೆಯಲ್ಲಿ ಸಮ್ಮೇಳನದ ಯಶಸ್ಸಿನ ಕುರಿತು ಚರ್ಚಿಸಲಾಯಿತು. ಸಭೆಯಲ್ಲಿ ದ.ಕ. ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಯುಬಿ.ಲೋಕಯ್ಯ,
ಜೆ ಬಾಲಕೃಷ್ಣ ಶೆಟ್ಟಿ,ಯಾದವ ಶೆಟ್ಟಿ, ಪಕ್ಷದ ಗುರುಪುರ ವಲಯ ಮುಖಂಡರಾದ ವಸಂತಿ ಕುಪ್ಪೆಪದವು ಆನಂದ ಇರುವೈಲು,ಅಶೋಕ್ ತಾರಿಗುಡ್ಡೆ, ಹೊನ್ನಯ್ಯ ಅಮೀನ್, ಮನೋಜ್ ವಾಮಂಜೂರ್, NA. ಹಸನಬ್ಬ ಸಿಪಿಐಎಂ ಗುರುಪುರ ವಲಯ ಕಾರ್ಯದರ್ಶಿ ಸದಾಶಿವದಾಸ್ ಮೊದಲಾದವರು ಉಪಸ್ಥಿತರಿದ್ದರು.
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು