News Karnataka Kannada
Sunday, April 28 2024
ಮಂಗಳೂರು

ಕುದ್ರೋಳಿ ಗಣೇಶ್ ರಿಗೆ ಜೆಸಿಐ ಕಮಲ ಪತ್ರ ಪ್ರಶಸ್ತಿ

New Project 2021 09 14t154355.964
Photo Credit :

ಮಂಗಳೂರು : ಅಂತರ್ರಾಷ್ಟ್ರೀಯ ಸೇವಾ ಸಂಸ್ಥೆಯಾದ ಜೂನಿಯರ್ ಚೇಂಬರ್ ಇಂಟರ್ ನ್ಯಾಷನಲ್ ( ಜೆಸಿಐ ) ಸಂಸ್ಥೆಯ ವತಿಯಿಂದ ನೀಡಲಾಗುವ ಪ್ರತಿಷ್ಠಿತ “ಕಮಲ ಪತ್ರ “ ಪ್ರಶಸ್ತಿಯನ್ನು ಪ್ರಸಿದ್ದ ಜಾದೂಗಾರ ಕುದ್ರೋಳಿ ಗಣೇಶ್ ಇವರಿಗೆ ಪ್ರದಾನ ಮಾಡಲಾಯಿತು. ಭಾರತದ ಜಾದೂ ಕ್ಷೇತ್ರಕ್ಕೆ ಅಂತರ್ರಾಷ್ಟ್ರೀಯ ಮನ್ನಣೆ ನೀಡುವಲ್ಲಿ ಶ್ರಮಿಸಿದ ಸಾಧನೆಯನ್ನು ಗಮನಿಸಿ ಜೆಸಿಐ ಲಾಲ್ ಭಾಗ ಘಟಕವು ಕುದ್ರೋಳಿ ಗಣೇಶ್ ಇವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿತ್ತು.

ಮಂಗಳೂರಿನ ಕದ್ರಿಯ ಲಯನ್ಸ್ ಅಶೋಕಾ ಸೇವಾ ಭವನದಲ್ಲಿ ನಡೆದ ಸಮಾರಂಭದಲ್ಲಿ ವಲಯ 15 ರ ಅಧ್ಯಕ್ಷರಾದ ಜೆಸಿಐ ಸೆನೆಟರ್ ಸೌಜನ್ಯ ಹೆಗ್ಡೆ ಇವರು ಪ್ರಶಸ್ತಿ ಪ್ರದಾನ ಮಾಡಿದರು. ಜಾದೂ ಕಲೆಯನ್ನು ಪ್ರೇಕ್ಷಕರ ಮನಸ್ಸಿಗೆ ಮುಟ್ಟಿಸುವಲ್ಲಿ ಕಳೆದ 30 ವರ್ಷಗಳಿಂದ ಕುದ್ರೋಳಿ ಗಣೇಶ್ ರವರು ಮಾಡುತ್ತಿರುವ ಅವಿರತ ಪ್ರಯತ್ನ ಅಭಿನಂದನಾರ್ಹ ಎಂದು ಅವರು ಹೇಳಿದರು.

ವಲಯ ಉಪಾಧ್ಯಕ್ಷರಾದ ದರ್ಶಿತ್ ಆರ್ ಶೆಟ್ಟಿ , ಜೆಸಿಐ ಲಾಲ್ ಬಾಗ್ ಘಟಕದ ಅಧ್ಯಕ್ಷರಾದ ಪ್ರಶಾಂತ್ ಬಿ ಶೆಟ್ಟಿ, ಘಟಕದ ಸ್ಥಾಪಕ ಅಧ್ಯಕ್ಷರಾದ ಪೀಟರ್ ಆಂಟನಿ ಪಿಂಟೋ, ನಿಕಟಪೂರ್ವ ಅಧ್ಯಕ್ಷರಾದ ಪ್ರಿನ್ಸ ಪಿಂಟೋ, ಮುಂದಿನ ಸಾಲಿನ ಅಧ್ಯಕ್ಷರಾದ ಪ್ರವೀಣ್ ಉಡುಪ ಮುಂತಾದವರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು