ಬೆಳ್ತಂಗಡಿ: ಇಂದು ಬಹುನಿರೀಕ್ಷಿತ ಕೇಂದ್ರದ ಬಜೆಟ್ ಮಂಡನೆಯಾಗಿದೆ. ಜನಪ್ರಿಯತೆಗೆ ಒತ್ತು ನೀಡದೆ ದೀರ್ಘಾವಧಿಯಲ್ಲಿ ಕ್ಷಮತೆ ಮತ್ತು ಬೆಳವಣಿಗೆಯ ಕನಸನ್ನು ಸಾಕಾರಗೊಳಿಸುವ ಬಜೆಟ್ ಇದಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ದೇಶದ ಆರ್ಥಿಕ ಸಮೀಕ್ಷೆ ಯನ್ನು ಸಹ ಮಂಡಿಸಲಾಗಿದ್ದು, ದೇಶದ ಆರ್ಥಿಕ ಅಭಿವೃದಿಯ ಬೆಳವಣಿಗೆ ಸರಾಸರಿ ೨೧-೨೨ರ ಸಾಲಿನಲ್ಲಿ ಶೇ ೯.೨ಮುಟ್ಟುವ ಕನಸು ಇದೆ. ಇದು ವಿಶ್ವದ ಎಲ್ಲಾ ಬೃಹತ್ ಆರ್ಥಿಕತೆಗಳಲ್ಲಿ ಯೇ ಗರಷ್ಠ ಮಟ್ಟದ್ದು. ನಾವು ನಮ್ಮೆಲ್ಲಾ ಸವಾಲುಗಳನ್ನು ಮೆಟ್ಟಿ ನಿಂತು ಅಭಿವೃದಿ ಯ ಹಾದಿಯಲ್ಲಿ ಹೆಜ್ಜೆ ಹಾಕುತ್ತಿದ್ದೇವೆ ಎಂದು
ಸ್ಪಷ್ಟಪಡಿಸುತ್ತದೆ.
ಆಯವ್ಯಯವು ಆರ್ಥಿಕ ಹಿಂಜರಿತ ಸರಿಪಡಿಸುವ ದೃಷ್ಟಿ ಹಾಗೂ ದೀರ್ಘಾವಧಿ ಆರ್ಥಿಕ ಅಭಿವೃದಿಯ ಗುರಿ ಹೊಂದಿದೆ. ಬಹು-ಮಾದರಿಯ ಮೂಲಸೌಕರ್ಯ ಮತ್ತು ಹೂಡಿಕೆಗೆ ಹೊಸ ಮಾರ್ಗಗಳನ್ನು ಬಜೆಟ್ಟನಲ್ಲಿ ಸೇಷ್ಟಿಸಲಾಗಿದೆ. ಹೀಗಾಗಿ ಭಾರತವು ಉದಯೋನ್ಮುಖ ಜಾಗತ್ಇಕ ಆರ್ಥಾಕತೆಯ ಕಂದ್ರ ವಾಗಿ ನಿಲ್ಲಲಿದೆ.
ಬಂಡವಾಳ ಹೂಡಿಕೆಯು ಕೈಗಾರಿಕೆಗಳಲ್ಲಿ ಉದ್ಯಮಶೀಲತೆಯ ವೇಗವನ್ನು ಹೆಚ್ಚಿ ಸಲು ಸಹಾಯಮಾಡುತ್ತದೆ. ಮಹಾಮಾರಿಯ ಪರಣಾಮಗಳಿಂದ ಹೊರಬರಲು ಇದು ಆವಶ್ಯಕ ಕೂಡಾ. ಖಾಸಗಿ ಹೂಡಿಕ್ಷದಾರರ ಸಾಮರ್ಥ್ಯವನ್ನು ೫.೫೪ ಲಕ್ಷ ಕೋಟಿ ರೂ.ಗಳಿಂದ ೭.೫೫ ಲಕ್ಷ ಕೋಟಿ ರೂ. ಹೂಡಿಕೆ ಹೆಚ್ಚಿಸುವ ಗುರಿ ಹೊಂದಿದೆ.. ಮೇಕ್ ಇನ್ ಇಂಡಿಯಾ ಮೂಲಕ ೬೦ ಲಕ್ಷ ಉದ್ಯೋಗ ಸೃಷ್ಟಿ ಮಾಡುವ ಹಾಗೂ ೩೦ ಲಕ್ಷ ಕೋಟಿ ಹೆಚ್ಚುವರಿ ಉತ್ಪಾದನೆಯನ್ನು ಹೆಚ್ಚಿಸುವ ಸಾಮರ್ಥ್ಯದ ಗುರಿ ಹೊಂದಿರುವುದು ಅಭಿನಂದನೀಯ.
ಡಿಜಿಟಲ್ ಕಲಿಕೆ ಕೌಶಲ್ಯಗಳ ಪೂರೈಕೆ ಮತ್ತು ನವೋದ್ಯಮಗಳ ಬೆಳವಣಿಗೆಗೆ ಒತ್ತು ನೀಡುವ ಕ್ರಮ ಸಮಕಾಲೀನ ಜಾಗತಿಕ ಅಗತ್ಯಗಳಿಗೆ ತಕ್ಕಂತೆ ಕೈಗೊಂಡಿರುವ ದಿಟ್ಟ ಹೆಜೆಗಳು. ಸಂಶೋಧನೆ ಹಾಗೂ ನಾವಿನ್ಯತೆಗಳಿಗೆ ಆದ್ಯತೆ ನೀಡಿರುವುದು ಸ್ವಾಗತಾರ್ಹ.
ಭಾರತವನ್ನು ಆತ್ಮನಿರ್ಭರವನ್ನಾಗಿ ಮಾಡುವ ಮತ್ತು ಸದೃಡಗೊಳಿಸುವ ಗುರಿಯನ್ನು ಹೊಂದಿರುವ ಈ ಬಜೆಟ್ ದೀರ್ಘಾವಧಿಯಲ್ಲಿ ಕ್ಷಮತೆ ಹಾಗೂ ಬೆಳವಣಿಗೆಯ ಕನಸನ್ನು ಸಾಕಾರಗೊಳಿಸಲಿದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ